BREKING NEWS
ಬಿಜೆಪಿ ಮುಖಂಡನ ಮನೆ ಕೆಡವಿದ ಯೋಗಿ ಸರ್ಕಾರ
ಒಂದು ವಾರದ ಕೆಳಗೆ ನೋಯ್ಡಾ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯನ್ನು ಕ್ಷುಲ್ಲಕ ಕಾರಣಕ್ಕಾಗಿ ನಿಂದಿಸಿ ಹಲ್ಲೆ ಮಾಡಿದ್ದ ಬಿಜೆಪಿ ಮುಖಂಡ ಹಾಗೂ ಬಿಜೆಪಿ ಕಿಸಾನ್ ಮೋರ್ಚಾದ ಸದಸ್ಯ ಎನ್ನಲಾಗಿರುವ ಶ್ರೀಕಾಂತ್ ತ್ಯಾಗಿ ಮನೆಯನ್ನು ಯೋಗಿ ಸರ್ಕಾರ ಕಡವಿ ಹಾಕಿರುವುದಾಗಿ ವರದಿಯಾಗಿದೆ.
ನೋಯ್ಡಾ ಸೆಕ್ಟರ್ 93 ಬಿಯಲ್ಲಿನ ಗ್ರಾಂಡ್ ಓಮಾಕ್ಸ್ ಸೊಸೈಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಗೆ ಶ್ರೀಕಾಂತ್ ತ್ಯಾಗಿ ನಿಂದಿಸಿ ಹಲ್ಲೆ ಮಾಡಿದ್ದ ವಿಡಿಯೋ ಬಾರೀ ಸದ್ದು ಮಾಡಿತ್ತು, ಈ ಪ್ರಕರಣ ದಾಖಲಾಗುತ್ತಿದ್ದಂತೆ ತ್ಯಾಗಿ ತಲೆ ಮರೆಸಿಕೊಂಡಿದ್ದ ಇದೀಗ ಆತನ ಆಕ್ರಮ ಕಟ್ಟಡಗಳನ್ನು ಕೆಡವಿ ನೆಲ ಸಮ ಮಾಡಿದೆ ಎಂದು ವರದಿಯಾಗಿದೆ