BREAKING NEWS
ಬಿಜೆಪಿಗೆ ಟಾಂಗ್ ನೀಡಿ ಹೊಸ ಸರ್ಕಾರದ ಸಿಎಂ ಆಗಲು ಹೊರಟ ನಿತೀಶ್ ಕುಮಾರ್
ಬಿಹಾರದಲ್ಲಿ ಬಿಜೆಪಿ ಮೈತ್ರಿ ಮುರಿದುಕೊಂಡಿರುವ ಜೆಡಿಯು ಹಳೆ ದೋಸ್ತಿ ಲಾಲು ಪ್ರಸಾದ್ ಯಾದವ್ ರ ಆರ್ ಜೆಡಿ ಕಾಂಗ್ರೆಸ್ ಇತರೆ ಪಕ್ಷಗಳ ಜೊತೆ ಸೇರಿ ಮಹಾ ಘಟ ಬಂದನ್ ಸರ್ಕಾರ ರಚನೆಗೆ ರೆಡಿಯಾಗಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಗರ ನಡೆಯಲಿರುವ ಪ್ರಮಾಣ ವಚನದಲ್ಲಿ ನಿತೀಶ್ ಕುಮಾರ್ ಮುಖ್ಯ ಮಂತ್ರಿಯಾಗಿ ತೇಜಸ್ವಿ ಯಾದವ್ ಉಪಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
9 ವರ್ಷದಲ್ಲಿ ಎರಡು ಬಾರಿ ಬಿಜೆಪಿಗೆ ನಿತೀಶ್ ಕುಮಾರ್ ಶಾಕ್ ನೀಡಿದ್ದಾರೆ. ಎನ್ ಡಿಎ ಯಿಂದ ಹೊರ ಬಂದು ಈಗ ಆರ್ ಜೆ ಡಿ ಜೊತೆ ಮಹಾ ಘಟ ಬಂಧನ್ 2 ಗೆ ಈಗ ರೆಡಿಯಾಗಿದ್ದಾರೆ. ಈಗಾಗಲೆ ರಾಜ್ಯಪಾಲರನ್ನು ಭೇಟಿ ಯಾಗಿ ಹಕ್ಕುಮಂಡಿಸಲು ಚರ್ಚೆ ನಡೆಸಿರುವ ಇವರು ಇಂದು ಮಧ್ಯಾಹ್ನ ಎರಡು ಗಂಟೆಗೆ ರಾಜ ಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಆರ್ ಜೆ ಡಿ ಮತ್ತು ಜೆಡಿಯು ಮಹಾ ಮೈತ್ರಿ ಮಹಾ ಘಟ ಬಂಧನ್ ಸರ್ಕಾರ ರಚನೆಯಾಗಲಿದೆ. ನಿರೀಕ್ಷೆಯಂತೆ ನೂತನ ಸಿಎಂ ಆಗಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿಯಾಗಿ ತೇಜಸ್ವು ಯಾದವ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.