ಬಿಜೆಪಿ ಹೆಸರೇಳದೆ ಟಾಂಗ್ ನೀಡಿದ ಮುರುಳಿಧರ ಹಾಲಪ್ಪ

ಜಿಲ್ಲಾ ಸುದ್ದಿ

ಕಳೆದ ಐವತ್ತು ವರ್ಷಗಳಿಂದ ರಾಷ್ಟ್ರ ಧ್ವಜವನ್ನು ತಿರಸ್ಕರಿಸಿದ್ದ ಪಕ್ಷ ಇದೀಗ ಹರಘರ್ ತಿರಂಗ ಎಂದು ಹೇಳುತ್ತಾ ಬೂಟಾಟಿಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ನ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ‌ ಮುರುಳಿಧರ ಹಾಲಪ್ಪ ವ್ಯಂಗ್ಯವಾಡಿದರು.

 

 

 


ಅವರು ಚಿತ್ರದುರ್ಗದಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮ‌ ಉದ್ಘಾಟಿಸಿ‌ಮಾತನಾಡಿದರು.ನಾವು ಸ್ವಾತಂತ್ರ್ಯ ಕ್ಕಾಗಿ ಜೀವನ ಬಲಿ‌ ಕೊಟ್ಟಿದ್ದೇವೆ. ಜಮೀನು ಅಸ್ತಿ ಕಳೆದುಕೊಂಡಿದ್ದೇವೆ. ಆದರೆ ಈಗ ಆಡಳಿತ ನಡೆಸುತ್ತಿರುವ ಪಕ್ಷ ಐವತ್ತು ವರ್ಷಗಳಿಂದ ರಾಷ್ಟ್ರ ಧ್ವಜವನ್ನು ಒಪ್ಪಿಕೊಳ್ಳದೆ ತಿರಸ್ಕರಿಸಿತ್ತು. ಈಗ ಹರ್ ಘರ್ ತಿರಂಗ ಎನ್ನುವ ಕಾರ್ಯಕ್ರಮವನ್ನು ಮಾಡುತ್ತಿದೆ ಎಂದರು.
ನಾವು ಅಮೃತ ಮಹೋತ್ಸವದ ಅಂಗವಾಗಿ 75 ಕಿಲೋ‌ಮೀಟರ್ ಪಾದಯಾತ್ರೆಯನ್ನು ಮಾಡುತ್ತಿದ್ದು, ಇಂದು ನಗರದಲ್ಲಿ ಪಾದಯಾತ್ರೆ ಆರಂಭಿಸುತ್ತಿದ್ದೇವೆ. ನಾವು ಹೋಗುವ ಕಡೆಗಳಲ್ಲಿ ಸ್ವಾತಂತ್ರ್ಯದ ಹಾಗೂ ಪಾದಾಯಾತ್ರೆಯ ಬಗ್ಗೆ ತಿಳಿಸಿಕೊಡಬೇಕಾಗಿದೆ ಎಂದರು. ಈ ಸಮಯದಲ್ಲಿ ಮಾಜಿ ಎಂಎಲ್ ಎ ಉಮಾಪತಿ, ಬಿಟಿ ಜಗದೀಶ್, ಜಿಬಿ ಬಾಲಕೃಷ್ಣ ಯಾದವ್ ಸಂಪತ್ ಕುಮಾರ್, ಮುನಿರಾ ಮಕರಂದ್ ಸಯದ್ ಖುದ್ದೂಸ್ ಇನ್ನಿತರರು ಇದ್ದರು

Leave a Reply

Your email address will not be published. Required fields are marked *