ಚಿತ್ರದುರ್ಗ,ಜ30(ಹಿಸ)- ಕಾವಾಡಿಗರಹಟ್ಟಿಯಲ್ಲಿ ಡಿಎಮ್ ಎಫ್ ನಿಧಿಯಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸ್ಥಳೀಯ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.
ಜಿಲ್ಲೆಯ ಡಿಎಂಎಫ್ ನಿಧಿಯಲ್ಲಿ 12 ಲಕ್ಷ ರೂಪಾಯಿ ಹಣದಲ್ಲಿ ನೂತನವಾಗಿ ಅಂಗನವಾಗಿ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ನಿರ್ಮಾಣ ಕಾರ್ಯವನ್ನು ನಿರ್ಮಿತಿ ಕೇಂದ್ರ ಹೊತ್ತುಕೊಂಡಿದೆ. ಇದರ ಜೊತೆಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆವತಿಯಿಂದ ನಿರ್ಮಾಣ ಮಾಡುತ್ತಿರುವ ಸಿಸಿ ರಸ್ತೆ ಕಾಮಗಾರಿಗೂ ಚಾಲನೆ ನೀಡಿದರು. ನಂತರ ಮಾತನಾಡಿ, ಎರಡು ಕಾಮಗಾರಿಗಳು ಕೂಡ ಗುಣಮಟ್ಟ ಹಾಗೂ ಉತ್ತಮ ರೀತಿಯಿಂದ ಕೂಡಿರಬೇಕು ಎಂದು ಹೇಳಿದರು.
ಸಂಯುಕ್ತವಾಣಿ