ಚಿತ್ರದುರ್ಗ: ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಯಲ್ಲಿ ಇಂದು ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.
ಮಹಾತ್ಮಾ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಒಂದು ನಿಮಿಷ ಕಾಲ ಮೌನಾಚರಣೆಯನ್ನು ಮಾಡಲಾಯಿತು. ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ ವಾಸಿಂ, ಅಧ್ಯಕ್ಷ ಆರ್ ಎ ಅಶೋಕ್, ಉಪಾಧ್ಯಕ್ಷ ಕೆ ಸಿ ರಮೇಶ್, ಸದಸ್ಯರುಗಳಾದ ಶ್ರೀಮತಿ ಸುಧಾ ಬಸವರಾಜ್, ಶ್ರೀಮತಿ ಪೂರ್ಣಿಮಾ ಬಸವರಾಜ್, ಸಯ್ಯದ್ ಸಜೀಲ್, ಸಯ್ಯದ್ ಮನ್ಸೂರ್, ಡಿ ಎಸ್ ವಿಜಯ, ಎಲ್ ವಿಜಯ ಸಿಂಹ ಖಾಟ್ರೋತ್, ಬಿ ಎಸ್ ರುದ್ರಪ್ಪ ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
ಸಂಯುಕ್ತವಾಣಿ