ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಸಿಡಿ ಹೊರ ಬೀಳುತ್ತಿದ್ದಂತೆ ರಾಜ್ಯದ ಹಲವಾರು ಶಾಸಕರು ಸಚಿವರ ಎದೆ ನಡುಕ ಶುರುವಾಗಿದ್ದು, ಮೂರ ಪಕ್ಷಗಳ ಸುಮಾರು 26 ಕ್ಕೂ ಹೆಚ್ಚು ಜನಪ್ರತಿನಿಧಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಇದೀಗ ರಾಜಕಾರಣದಲ್ಲಿ ಈ ವಿಚಾರ ಸಚಿವರು ಶಾಸಕರುಗಳಲ್ಲಿ ಸಿಡಿ ಟೆನ್ಷನ್ ಶುರು ಮಾಡಿದೆ. ಸುಮಾರು 50 ಸಿಡಿಗಳು ಇವೆ ಎಂದು ಕೂಡ ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಚಿವರು ಹಾಗೂ ಶಾಸಕರುಗಳಲ್ಲಿ ಢವ ಢವ ಶುರುವಾಗಿದೆ. ಕೋರ್ಟ್ ಮೊರೆ ಹೋಗಿರುವ ಕುರಿತು ಸಚಿವ ನಾರಾಯಣಗೌಡ ಪ್ರತಿಕ್ರಿಯಿಸಿ, ಭಯದಿಂದ ಕೋರ್ಟ್ ಮೊರೆ ಹೋಗಿಲ್ಲ. ಸತ್ಯಾಂಶ ಹೊರಬೀಳಬೇಕು, ಅದು ಬಿಟ್ಟು ವೈಯುಕ್ತಿಕ ತೆಜೋವಧೆಯಾಗುತ್ತದೆ ಇದಕ್ಕಾಗಿ ಕೋರ್ಟ್ ಗೆ ಹೋಗಿದ್ದು ಎಂದು ಹೇಳಿದ್ದಾರೆ. ಇತ್ತ 26 ಜನ ಪ್ರತಿನಿಧಿಗಳಲ್ಲಿ 6 ಜನ ಸಚಿವರುಗಳು ಯಾಕೆ ಒಟ್ಟಿಗೆ ಕೋರ್ಟ್ ಗೆ ಹೋಗಿದ್ದಾರೆ . ಎಂದು ಮಾಹಿತಿಯನ್ನು ಬಿಜೆಪಿ ಹೈ ಕಮಾಂಡ್ ಕೇಳಿದ್ದು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸಂಯುಕ್ತವಾಣಿ