ಕರ್ತವ್ಯ ಲೋಪ ಉಪ ತಹಶೀಲ್ದಾರ್ ಸೇರಿ ನಾಲ್ವರ ಅಮಾನತ್ತು

ಜಿಲ್ಲಾ ಸುದ್ದಿ

ಚಿತ್ರದುರ್ಗ: ತಾಲ್ಲೂಕಿನ ತುರುವನೂರು ಗ್ರಾಮ ಪಂಚಾಯಿತಿಗೆ ನಡೆದ ಉಪಚುನಾವಣೆಯಲ್ಲಿ ಕರ್ತವ್ಯಲೋಪ ಎಸಗಿದ ಉಪತಹಶೀಲ್ದಾರ್‌ ಸೇರಿ ನಾಲ್ವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ.

 

 

 

ತುರುವನೂರು ಉಪತಹಶೀಲ್ದಾರ್ ಮಂಜಪ್ಪ, ಹಿರೇಕಬ್ಬಿಗೆರೆ ಗ್ರಾಮ ಲೆಕ್ಕಿಗ ಎಚ್‌.ವಿಜಯಕುಮಾರ್, ಕೂನಬೇವು ಗ್ರಾಮ ಲೆಕ್ಕಿಗ ಎಲ್‌.ಮಂಜುನಾಥ್, ಗೋನೂರು ಗ್ರಾಮ ಲೆಕ್ಕಿಗ ಟಿ.ಸ್ವಾಮಿ ಅಮಾನತುಗೊಂಡವರು.ತುರುವನೂರು ಗ್ರಾಮದ 6ನೇ ವಾರ್ಡ್‌ಗೆ ಡಿ.27ರಂದು ಉಪಚುನಾವಣೆ ನಡೆದಿತ್ತು. ಮತಗಟ್ಟೆ ಸಂಖ್ಯೆ 39ರಲ್ಲಿ 50 ನಾಮಪತ್ರಗಳು ನಾಪತ್ತೆಯಾಗಿದ್ದವು. ಈ ವಾಸ್ತವವನ್ನು ಮುಚ್ಚಿಟ್ಟು ಡಿಮಸ್ಟರಿಂಗ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ತಹಶೀಲ್ದಾರ್‌ ತನಿಖೆಯಲ್ಲಿ ಈ ಲೋಪ ಬೆಳಕಿಗೆ ಬಂದಿತ್ತು. ಹೀಗಾಗಿ, ಮತಗಟ್ಟೆ ಸಂಖ್ಯೆ 39ರಂದು ಬುಧವಾರ ಮರುಮತದಾನ ನಡೆಸಲಾಗಿದೆ

Leave a Reply

Your email address will not be published. Required fields are marked *