ಗುತ್ತಿಗೆದಾರನ ಬಿಲ್ ಮಾಡಿಕೊಡಲು, ನಾಲ್ಕು ಲಕ್ಷ ಲಂಚ ಪಡೆಯುವ ವೇಳೆ, ಚಿತ್ರದುರ್ಗ ಬಯಲು ಸೀಮೆ ಅಭಿವೃದ್ದಿ ಮಂಡಳಿ ಕಾರ್ಯದರ್ಶಿ, ಬಸವರಾಜಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜಗಲೂರಿನ ಗುತ್ತಿಗೆದಾರ ಸಿದ್ದನಗೌಡ ಎಂಬುವರಿಂದ ನಾಲ್ಕು ಲಕ್ಷ ಲಂಚವನ್ನು ಕಾಮಗಾರಿ ಬಿಲ್ ಮಾಡಿಕೊಡಲು ಬೇಡಿಕೆ ಇಟ್ಟಿದ್ದರು.ಹಣ ಕೊಡುವಾಗ ಲೋಕಾಯುಕ್ತ ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಲಂಚ ಸ್ವೀಕರಿಸುವ ವೇಳೆ ಕಾರ್ಯದರ್ಶಿ ಬಸವರಾಜಪ್ಪ ನನ್ನು ವಶಕ್ಕೆ ಪಡೆದಿದ್ದಾರೆ. ಲಂಚದ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.