ಅಭಿವೃದ್ದಿ ಕೆಲಸಗಳಲ್ಲಿ ರಾಜಕಾರಣ ಬೆರೆಸುವುದಿಲ್ಲ: ಗೋವಿಂದ ಕಾರಜೋಳ

ರಾಜ್ಯ

ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಸಾರ್ವತ್ರಿಕ ಕಾರ್ಯಗಳಿಗೆ ನಾನು 19 ಲಕ್ಷ ಜನರ ಪ್ರತಿನಿಧಿಯಾಗಿರುತ್ತೇನೆ. ಅಭಿವೃದ್ದಿ ಕೆಲಸಗಳಲ್ಲಿ ರಾಜಕಾರಣ ಬೆರೆಸುವುದಿಲ್ಲ ಎಂದು ಚಿತ್ರದುರ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.‌ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.ಅಭಿವೃದ್ದಿ ಬೇರೆ ರಾಜಕಾರಣ ಬೇರೆ, ಅಭಿವೃದ್ದಿ ಕೆಲಸಗಳಿಗೆ ಯಾವಾಗಲೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಎಲ್ಲರೂ ಅಭಿವೃದ್ದಿ ಸಹಕಾರ ಸಹಾಯ ಹಾಗು ಮಾರ್ಗದರ್ಶನ ಮಾಡಬೇಕು. ಎಲ್ಲಾ ಅಭಿವೃದ್ದಿ ಕೆಲಸದಲ್ಲಿ ಮುನ್ನುಗ್ಗೋಣ, ಮತ್ತೊಮ್ಮೆ ಮೋದಿ ಎನ್ನುವುದನ್ನು, 14 ಲೋಕ ಸಭಾ ಕ್ಷೇತ್ರದಲ್ಲಿ ತೀರ್ಮಾನ ಮಾಡಿದ್ದಾರೆ ಎಂದರು.ಇದಕ್ಕೂ ಮುನ್ನ ಮಾತಾಡುತ್ತಾ,ನನ್ನ ಚುನಾವಣೆಗೆ ಬೆವರು ಸುರಿಸಿ ಕೆಲಸ ಮಾಡಿದ ಕಾರ್ಯಕರ್ತರಿಗೆ ನಾನು ಬೆಲೆ ಕಟ್ಟಲು ಸಾಧ್ಯವಿಲ್ಲ, ನಾನು ಪಕ್ಷದ ಕೆಲಸ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿರುತ್ತೇನೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ನಾನು ಚಿತ್ರದುರ್ಗಕ್ಕೆ ಹೊಸಬನಾದರೂ, ಪಕ್ಷಕ್ಕಾಗಿ ದೇಶಕ್ಕಾಗಿ ಉರಿವ ಬಿಸಿಲಿನಲ್ಲಿ ಶ್ರಮ‌ ಹಾಕಿ ದುಡಿದಿದ್ದಾರೆ. ನನ್ನನ್ನು ಬಹಳ ಪ್ರೀತಿಯಿಂದ ಕಂಡಿದ್ದಾರೆ. ಇದರಿಂದ ನಾನು ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದರು. ಈ ಸಮಯದಲ್ಲಿ ಮಾಧ್ಯಮ ಸಂಚಾಲಕ ದಗ್ಗೆ ಶಿವಪ್ರಕಾಶ್ ಮತ್ತು ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೆ ಇತರರಿದ್ದರು.

 

 

 

Leave a Reply

Your email address will not be published. Required fields are marked *