ತಿಪ್ಪೇರುದ್ರಸ್ವಾಮಿ ನುಡಿದಂತೆ ಮಾಡಿದಷ್ಟು ನೀಡು ಭಿಕ್ಷೆ ಗೆ ತಕ್ಕ ಪ್ರತಿಫಲ ಸಿಗಲಿದೆ: ಬಿಎನ್ ಚಂದ್ರಪ್ಪ

ರಾಜ್ಯ

ನಮಗೆ ರಾಜ್ಯದಲ್ಲಿ ಸಿದ್ದರಾಮಯ್ಯ, ನೀಡಿರುವ ಗ್ಯಾರಂಟಿಗಳು ಹಾಗೂ ಕೇಂದ್ರದ ಐದು ಗ್ಯಾರಂಟಿಗಳ ಭರವಸೆ ಕೈ ಹಿಡಿದು, ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ ಎನ್ ಚಂದ್ರಪ್ಪ‌ ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಚುನಾವಣೆಯ ಸಮಯದಲ್ಲಿ ಪ್ರಚಾರಕ್ಕೆಂದು ಹೋದಾಗ ಮಹಿಳೆಯರು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನೀಡಿರುವ ಆರ್ಥಿಕ ಸಹಾಯ ನಮಗೆ ಬಹಳಷ್ಟು ಕಾಪಾಡುತ್ತಿದೆ. ನಮಗೆ ಔಷಧಿಗಳಿಗೆ,ಶಾಲಾ‌ಮಕ್ಕಳ ಫೀಸ್ ಕಟ್ಟಲು, ಸಹಕಾರಿಯಾಗಿದೆ. ನಾವು ಕಾಂಗ್ರೆಸ್ ನ್ನು ಮರೆಯಲು ಸಾಧ್ಯವಾ ಎಂದು ನಾಡಿನ ಮಹಿಳೆಯರು ಪ್ರಶ್ನಿಸುತ್ತಾರೆ. ಇದೆಲ್ಲವೂ ಬಿರುಸಿನ, ಹಾಗೂ ಅತೀ ಹೆಚ್ಚು ಮತದಾನ ಆಗಲು ಕಾರಣವಾಗಿದೆ. ಅದು ನಮಗೆ ಪರವಾಗಿದೆ ಎನ್ನುವ ಭರವಸೆ ಇದೆ.ನಾನು ಇಷ್ಟೆ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು‌ ಹೇಳುವುದಿಲ್ಲ, ಆಂಜನೇಯ ಅವರು ಹಿರಿಯ ನಾಯಕರು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ನನ್ನ ಭವಿಷ್ಯವನ್ನು ಮತದಾರರು ಗೌಪ್ಯವಾಗಿ ಮತ ಪೆಟ್ಟಿಗೆಯಲ್ಲಿ ಜಮಾ‌ ಮಾಡಿದ್ದಾರೆ.ಈ ತೀರ್ಪು ಆಶಾದಾಯಕವಾಗಿ ನನ್ನ ಪರವಾಗಿ ಬರುತ್ತದೆ ಎಂಬ ಅಚಲ ನಂಬಿಕೆ ನನ್ನದು. ಇಷ್ಟೆ ಮತಗಳು ಬರುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ. ಬಿಜೆಪಿಯವರು ಹೇಳಿದಂತೆ ನಾನು ಹೇಳುವುದಿಲ್ಲ. ನಾಲ್ಕನೆ ತಾರೀಕು ಫಲಿತಾಂಶ ಹೊರ ಬರುತ್ತದೆ. ನಮ್ಮ‌ ಆರಾಧ್ಯ ದೈವ ಗುರು ತಿಪ್ಪೇರುದ್ರಸ್ವಾಮಿ, ಹೇಳಿದಂತೆ ಮಾಡಿದಷ್ಟು ನೀಡು ಭಿಕ್ಷೆ ಎನ್ನುವ ರೀತಿ,ಶ್ರಮ ಕಾರ್ಯಕ್ರಮ, ಜಾತ್ಯಾತೀತ ಮನೋಭಾವನೆ ಇದೆ. ಶ್ರಮಕ್ಕೆ ತಕ್ಕಂತ ಪ್ರತಿಫಲ ಬರುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದರು.‌ಈ‌ ಸಮಯದಲ್ಲಿ ‌ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂಕೆ ತಾಜ್ ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಡಿಎನ್ ಮೈಲಾರಪ್ಪ, ಸಂಪತ್ ಕುಮಾರ್, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಯೋಗೀಶ್ ಬಾಬು, ಕುಮಾರಗೌಡ, ಮಾಜಿ ಕೂಡ ಅಧ್ಯಕ್ಷ ಬಿಟಿ ಜಗದೀಶ್ ಇನ್ನಿತರೆ ಮುಖಂಡರು ಇದ್ದರು.

 

 

 

Leave a Reply

Your email address will not be published. Required fields are marked *