ಪತಿಯ ಕೆಲಸ ಕೊಡಿಸುವಂತೆ ಸಚಿವರ ಕಾಲಿಗೆ ಬಿದ್ದ ಮಹಿಳೆ

ರಾಜ್ಯ

ವಿಜ್ಞಾನಿ ಪತಿಯೂ ಕೋವಿಡ್ ನಿಂದ ಮೃತಪಟ್ಟಿದ್ದು, ಅವರ ಅನುಕಂಪ ಆಧಾರಿತ ಕೆಲಸವನ್ನು ನಮಗೆ ಕೊಡಿಸಿಕೊಡಿ ಎಂದು ಮಹಿಳೆಯೊಬ್ಬರು ಎಂಟು ತಿಂಗಳ ಮಗುವಿನೊಂದಿಗೆ ಕೇಂದ್ರ ಸಚಿವರ ಕಾಲಿಗೆರಗಿದ ಘಟನೆ ಚಿತ್ರದುರ್ಗದಲ್ಲಿ‌ ನಡೆಯಿತು.

 

 

 


ಪತಿಯೂ ಒಂದು‌ ವರ್ಷದ ಹಿಂದೆ ಕೋವಿಡ್ ನಿಂತ ಮೃತ ಪಟ್ಟಿದ್ದಾರೆ. ಅಂದಿನಿಂದ ನಮಗೆ ಯಾವುದೇ ಪಿಂಚಣಿಯ ಹಣವೂ ಬಂದಿಲ್ಲ. ಜೊತೆಗೆ ನಮಗೆ ಕೆಲಸವೂ ಇಲ್ಲ. ಇದರಿಂದ ನಮಗೆ ಕೆಲಸ ಬೇಕಿದೆ. ಸಹಾಯ ಮಾಡಿ ಎಂದು ಇಂದು ಜಿಲ್ಲಾಧಿಕಾರಿ ಕಚೇರಿಗೆ ರೈಲ್ವೇ ಅಧಿಕಾರಿಗಳ ಸಭೆ ನಡೆಸಲು ಬಂದಿದ್ದ ಕೇಂದ್ರ ರಾಜ್ಯ ಸಚಿವ ನಾರಾಯಣಸ್ವಾಮಿ ಅವರ ಕಾಲಿಗೆರಗಿದ್ದು ಎಂಥವರನ್ನು ಮನಕಲುಕುವಂತಿತ್ತು.
ಇದರಿಂದ ಕೂಡಲೇ ಹಾಗೆಲ್ಲಾ ಮಾಡಬಾರದು ಎಂದು ಹೇಳಿದ ಸಚಿವರು ಮಹಿಳೆಯಿಂದ ದಾಖಲೆಗಳನ್ನು ಪಡೆದುಕೊಂಡು ಒಂದು ತಿಂಗಳೊಳಗೆ ನಿಮ್ಮ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದರು.

Leave a Reply

Your email address will not be published. Required fields are marked *