ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಓ ಡಾ. ನಂದಿನಿದೇವಿ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನೀಕೇರಿ ಅವರುಗಳ ವರ್ಗಾವಣೆ ಮಾಡಿ ಆದೇಶವನ್ನು ಸರ್ಕಾರ ಹೊರಡಿಸಿದೆ.
ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾಎಸ್ ಮನ್ನೀಕೇರಿ ಅವರ ಸ್ಥಳಕ್ಕೆ ದಿವ್ಯಾ ಪ್ರಭು ಅವರು ಚಿತ್ರದುರ್ಗ ಡಿಸಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ದಿವ್ಯಾ ಪ್ರಭು ಅವರು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಅವರನ್ನು ಚಿತ್ರದುರ್ಗಕ್ಕೆ ಜಿಲ್ಲಾಧಿಕಾರಿಯಾಗಿ ವರ್ಗ ಮಾಡಲಾಗಿದೆ. ಇನ್ನು ಜಿಲ್ಲಾ ಪಂಚಾಯಿತಿಯ ಸಿಇಓ ಆಗಿದ್ದ ಡಾ. ನಂದಿನಿದೇವಿ ಅವರ ಸ್ಥಳಕ್ಕೆ ಎಂ ಎಸ್ ದಿವಾಕರ್ ಅವರನ್ನು ವರ್ಗಾಯಿಸಿದ್ದು, ಅವರು ಕೃಷಿ ಇಲಾಖೆಯ ಹೆಚ್ಚುವರಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರುಗಳನ್ನು ಡಿಸಿ ಮತ್ತು ಸಿಇಓ ಗಳಾಗಿ ಸರ್ಕಾರ ವರ್ಗಾಯಿಸಿದೆ.