ಕರುನಾಡಿಗೆ ಸಂಫೂರ್ಣ ಲಾಕ್ ಡೌನ್?

ಜಿಲ್ಲಾ ಸುದ್ದಿ ರಾಜ್ಯ

ಬೆಂಗಳೂರು:ಕೋರೋನಾ ಎರಡನೇ ಅಲೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಮವಾರದಿಂದ ಸಂಪೂರ್ಣ ಲಾಕ್ ಡೌನ್ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೊನೆಗೂ ತೆಗೆದುಕೊಂಡಿದೆ.Chitradurga full lockbdown

 

 

 

ಇಂದು ಸಿಎಂ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಎರಡನೇ ಅಲೆ ಕೇಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ ಲಕ್ಷ ಮೀರಿತ್ತು. ಹಾಗೇಯೆ ಸಾವಿನ ಸಂಖ್ಯೆಯು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಇದರಿಂದ ಕೋವಿಡ್ ತಜ್ಞರ ಸಲಹಾ ಸಮಿತಿ ಸಂಫೂರ್ಣ ಲಾಕ್ ಡೌನ್ ಮಾಡಲು ಸಲಹೆಯನ್ನು ನೀಡಿತ್ತಾದರೂ ಸರ್ಕಾರ ಅರೇ ಲಾಕ್ ಡೌನ್ ಹಾಗೂ ವೀಕೇಂಡ್ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿತ್ತು. ಆದರೆ ಇದರಿಂದ ಯಾವುದೇ ಪ್ರಯೋಜನ ಆಗಲಿಲ್ಲ.‌ಈ‌ ಕಾರಣಕ್ಕೆ ಇಂದಿನ ಮಹತ್ವದ ಸಭೆಯಲ್ಲಿ  ಮೇ 24 ರವೆರೆಗೆ ಸಂಪೂರ್ಣ ಲಾಕ್ ಡೌನ್ ಹೇರುವ ನಿರ್ಣಯವನ್ನು ತೆಗೆದುಕೊಂಡಿದ್ದು, ಸರ್ಕಾರದಿಂದ ಅಧಿಕೃತ ಘೋಷಣೆ ಮಾತ್ರ ಹೊರ ಬೀಳಬೇಕಾಗಿದೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *