ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ಮೂಡಲಗಿರಿಯಪ್ಪ

ಜಿಲ್ಲಾ ಸುದ್ದಿ

ಹಿರಿಯೂರಿನ ವಾಣಿ ವಿಲಾಸ ಜಲಾಶಯವು ಭರ್ತಿಯಾಗಿ ಕೋಡಿ‌ ಬಿದ್ದಿದ್ದು ನೀರು ಹರಿದು ಹೊರಗೆ ಹೋಗುತ್ತಿದೆ. ಕೋಡಿಯಿಂದ ಐದು ಅಡಿಗಳಷ್ಟು ಮೇಲೆ ಹರಿಯುತ್ತಿದ್ದು, ವೇದಾವತಿಯ 16 ನೇ ವಾರ್ಡಿನ ವಸತಿಗಳಿಗೆ ನೀರು ನುಗ್ಗಿದ್ದು, ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇದರಿಂದ ಅವರಿಗಾಗಿ ಕಾಳಜಿ‌ ಕೇಂದ್ರವನ್ನು ಕೂಡ ತೆರೆಯಲಾಗಿದೆ. ಇದರಿಂದ ನಿರ್ಮಿತಿ‌ ಕೇಂದ್ರದ ಯೋಜನಾ ನಿರ್ದೇಶಕರಾದ ಮೂಡಲಗಿರಿಯಪ್ಪ‌ ಅವರ ನೇತೃತ್ವದಲ್ಲಿ ಅವರ ಅಭಿಮಾನಿ ಬಳಗವು 16 ನೇ ವಾರ್ಡಿನ ನೂರು ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಹೊದಿಕೆ,ಬಕೆಟ್ ಸೋಪ್ ಪೇಸ್ಟ್, ಚಾಪೆ ಇನ್ನಿತರೇ ವಸ್ತುಗಳನ್ನು ನೀಡಿದ್ದಾರೆ. ನಾಳೆಯೂ ಕೂಡ ಈ ಅಗತ್ಯ ವಸ್ತುಗಳ ವಿತರಣೆ ಕಾರ್ಯಕ್ರಮವು ನಡೆಯಲಿದೆ ಎಂದು‌ ಅಭಿಮಾನಿ‌ ಬಳಗವು ತಿಳಿಸಿದೆ. ಈ ಸಮಯದಲ್ಲಿ ನಿರ್ಮಿಸಿ ಕೇಂದ್ರದ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ, ಸಂಧ್ಯಾ ಮೂಡಲಗಿರಿಯಪ್ಪ ಇನ್ನಿತರರು ಇದ್ದರು.

 

 

 

Leave a Reply

Your email address will not be published. Required fields are marked *