ಚಿತ್ರದುರ್ಗ:ಡಿ.2: ಜನರ ನಿರೀಕ್ಷೆಗಿಂತ ಹೆಚ್ಚಿನ ಅನುದಾನ ತಂದು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ವಿ.ಪಿ ಬಡಾವಣೆ 1ನೇ ಕ್ರಾಸ್ ನ ಹೊಂಗಿರಣ ಶಾಲೆಯ ಬಳಿಯಲ್ಲಿ ಅಮೃತ ಯೋಜನೆಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸುಮಾರು 15 ಕೋಟಿ ವೆಚ್ಚದಲ್ಲಿ ಎಲ್ಲಾ ಒಳ ರಸ್ತೆಗಳನ್ನು ಮಾಡಲಾಗುತ್ತಿದೆ.ಇದರಲ್ಲಿ 40 ಲಕ್ಷ ವೆಚ್ಚದಲ್ಲಿ ವಿ.ಪಿ.ಬಡಾವಣೆ ಒಳರಸ್ತೆಗಳನ್ನು ಮಾಡಲು ನೀಡಲಾಗಿದೆ. ನಗರದ ಎಲ್ಲಾ ಕಡೆಗಳಲ್ಲಿ ಚಿಕ್ಕ ಚಿಕ್ಕ ಒಳರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಚಿತ್ರದುರ್ಗದ ಜನರು ನಿರೀಕ್ಷೆಗಿಂತ ಹೆಚ್ಚಿನ ಅನುದಾನ ನಮ್ಮ ಕ್ಷೇತ್ರಕ್ಕೆ ನಮ್ಮ ಬಿಜೆಪಿ ಸರ್ಕಾರ ನೀಡಿದೆ. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳ ಕಾಮಗಾರಿ ಈಗಾಗಲೇ ಮುಗಿಸಲಾಗಿದೆ ಎಂದರು.
ನಗರಕ್ಕೆ ನೀರಿನ ಸಮಸ್ಯೆ ಇಲ್ಲ, ರಸ್ತೆಗಳು ಅಭಿವೃದ್ಧಿ , ಅಲಂಕಾರಿಕ ಬೀದಿ ದೀಪ, ಪಾರ್ಕ್ ಗಳು ಅಭಿವೃದ್ಧಿಗಳು ಮಾಡಿ ಜನರ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಅನೇಕ ಪಾರ್ಕ್ ಗಳಲ್ಲಿ ಓಪನ್ ಜಿಮ್ ಮಾಡಲಾಗಿದ್ದು ಸಾವಿರರು ಜನರ ಆರೋಗ್ಯ ಕಾಪಡಿಕೊಳ್ಳಲು ಅನಕೂಲವಾಗಿದೆ ಎಂದು ತಿಳಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್, ನಗರಸಭೆ ಸದಸ್ಯೆ ರೋಹಿಣಿ ನವೀನ್, ಮುಖಂಡರಾದ ವೀರೇಶ್, ವಿಶ್ವನಾಥ, ರಾಮಕೃಷ್ಣ, ಶಾಮಲಾ ಮತ್ತು ಸ್ಥಳೀಯರು ಹಾಜರಿದ್ದರು.