ಮಾದಿಗ ಮುನ್ನೆಡೆ ಆತ್ಮಗೌರವ ಸಮಾವೇಶ
ಚಿತ್ರದುರ್ಗ ಜಿಲ್ಲೆಯ ಮಾದಿಗ,ಸಮಗಾರ, ಮೋಚಿ, ಡೋರ್, ಡಕ್ಕಲಿಗ, ಬಂಗಿ ಇತ್ಯಾದಿ ಮಾದಿಗ ಸಂಬಂಧಿತ ಜಿಲ್ಲಾ ಮಾದಿಗ ಮುನ್ನೆಡೆ ಆತ್ಮಗೌರವ ಸಮಾವೇಶವನ್ನು ನಾಳೆ 11 ಗಂಟೆಗೆ ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಿಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ
ಈ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪರುಶುರಾಮ ಮನವಿ ಮಾಡಿದ್ದಾರೆ. ಮಾದಿಗ ಸಂಬಂಧಿತ ಜಾತಿಗಳ ಪ್ರಮುಖರು, ಯುವಕರು, ಚಿಂತಕರು, ವಿದ್ಯಾರ್ಥಿಗಳು ಹಾಗೂ ಹೋರಾಟಗಾರರು, ಭಾಗವಹಿಸಿಸುತ್ತಿದ್ದಾರೆ. ವಿವಿಧ ಸಂಘ ಸಂಸ್ಥೆ ಮುಖಂಡರು, ವಿವಿಧ ಪಾರ್ಟಿಯಲ್ಲಿರುವ ರಾಜಕೀಯ ಕಾರ್ಯಕರ್ತರು ಪ್ರತಿ ಗ್ರಾಮದಲ್ಲಿ ಮನೆ ಮನೆಗೂ ಭಾಗವಹಿಸಲು ಅವಕಾಶವಿದ್ದು ನಾಳೆ ದಿನ ಈ ಸಮಾವೇಶದಲ್ಲಿ ಒಳ ಮೀಸಲಾತಿ ಶಿಫಾರಸ್ಸಿನ ನಂತರದ ಬೆಳವಣಿಗೆಗಳ ಚರ್ಚೆಯಾಗುವ ವಿಷಯಗಳನ್ನು ಅರಿತುಕೊಳ್ಳಬೇಕಾಗಿರುವುದು ತುಂಬಾ ಮಹತ್ವ ಪಡೆಯುವ ಈ ಸಮಾವೇಶದಲ್ಲಿ ಜಿಲ್ಲೆಯ ಸಮುದಾಯವು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿದ್ದಾರೆ.