ಚಿತ್ರದುರ್ಗ- ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿ ಚಕ್ರ ವಾಹವನ್ನು ಜಿಪಂ ಸದಸ್ಯ ಅಜ್ಜಪ್ಪ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹ ರಾಜು ವಿತರಿಸಿದರು.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಯೋಜನೆಯಡಿ,18-19 ಮತ್ತು 20 ನೇ ಸಾಲಿನಲ್ಲಿ ಮಂಜೂರಾಗಿದ್ದ 74.79 ಲಕ್ಚ ರೂಪಾಯಿಯಲ್ಲಿ 91 ಯಂತ್ರ ಚಾಲಿತ ದ್ವಿ ಚಕ್ರ ವಾಹನಗಳು ಖರೀದಿಸಿದ್ದು, ಅವುಗಳನ್ನು 51 ಅರ್ಹ ಫಲಾನುಭವಿಗಳಿಗೆ ವಾಹನಗಳನ್ನು ವಿತರಿಸಲಾಗಿದೆ. ಇಂದೂ ಕೂಡ ಜಿಪಂ ಸದಸ್ಯ ಅಜ್ಜಪ್ಪ ವಾಹನವನ್ನು ವಿತರಿಸಿದರು.
ಈ ಸಮಯದಲ್ಲಿ ಚಿತ್ರದುರ್ಗ ಮೆದೇಹಳ್ಳಿ ಜಿಪಂ ಕ್ಷೇತ್ರದ ಸದಸ್ಯ ನರಸಿಂಹರಾಜು ಹಾಗೂ ಜಿಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ವಿಕಲಚೇತನ ಇಲಾಖಾಧಿಕಾರಿ ವೈಶಾಲಿ ಇದ್ದರು.
ಸಂಯುಕ್ತವಾಣಿ