ನೀರಿನ ರಭಸಕ್ಕೆ ಕುಸಿದು ಬಿದ್ದ ಸಮುದ್ರದ ಹಳ್ಳಿ‌ ಸೇತುವೆ

ಜಿಲ್ಲಾ ಸುದ್ದಿ

ಹಿರಿಯೂರು ತಾಲೂಕಿನ ಸಮುದ್ರದಹಳ್ಳಿ ಮತ್ತು ಮ್ಯಾದನಹೊಳೆ ಗ್ರಾಮಗಳ ಮಧ್ಯೆ ಇರುವ ಸುವರ್ಣಮುಖಿ ನದಿಯ ಸೇತುವೆಯು ಕುಸಿದು ಬಿದ್ದಿದ್ದೆ. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ, ಸುಮಾರು ಮೂವತ್ತು ವರ್ಷಗಳ ಹಿಂದೆ ಸಂಪರ್ಕ ಸೇತುವಾಗಿ ಈ‌ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಇಂದು ವೇದಾವತಿಯ ನೀರಿನ ರಭಸಕ್ಕೆ ಸೇತುವೆಯೂ ಕುಸಿದು ಬಿದ್ದಿದೆ. ಇಂತಹ ಸ್ಥಳಕ್ಕೆ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಡಿ.ಟಿ. ಶ್ರೀನಿವಾಸ್ ಅವರು ಭೇಟಿ ನೀಡಿದ್ದಾರೆ. ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿರುವುದರಿಂದ ಅವರ ಗಮನಕ್ಕೆ ತಂದು ಸಾರ್ವಜನಿಕರಿಗೆ ಶೀಘ್ರದಲ್ಲೇ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ, ಸದಸ್ಯರಾದ ಜಗದೀಶ್, ಕೃಷ್ಣಮೂರ್ತಿ, ಬಾಬು, ಪುಷ್ಪಾವತಿ, ತಿಪ್ಪೇಸ್ವಾಮಿ, ಮಹಾದೇವಮ್ಮ ಮುಖಂಡರಾದ ತಿಪ್ಪೇಸ್ವಾಮಿ, ತಿಮ್ಮರಾಯಪ್ಪ ಮುಂತಾದವರು ಉಪಸ್ಥಿತರಿದ್ದರು.

 

 

 

Leave a Reply

Your email address will not be published. Required fields are marked *