ಹಿರಿಯೂರು ತಾಲೂಕಿನ ಸಮುದ್ರದಹಳ್ಳಿ ಮತ್ತು ಮ್ಯಾದನಹೊಳೆ ಗ್ರಾಮಗಳ ಮಧ್ಯೆ ಇರುವ ಸುವರ್ಣಮುಖಿ ನದಿಯ ಸೇತುವೆಯು ಕುಸಿದು ಬಿದ್ದಿದ್ದೆ. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ, ಸುಮಾರು ಮೂವತ್ತು ವರ್ಷಗಳ ಹಿಂದೆ ಸಂಪರ್ಕ ಸೇತುವಾಗಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಇಂದು ವೇದಾವತಿಯ ನೀರಿನ ರಭಸಕ್ಕೆ ಸೇತುವೆಯೂ ಕುಸಿದು ಬಿದ್ದಿದೆ. ಇಂತಹ ಸ್ಥಳಕ್ಕೆ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಡಿ.ಟಿ. ಶ್ರೀನಿವಾಸ್ ಅವರು ಭೇಟಿ ನೀಡಿದ್ದಾರೆ. ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿರುವುದರಿಂದ ಅವರ ಗಮನಕ್ಕೆ ತಂದು ಸಾರ್ವಜನಿಕರಿಗೆ ಶೀಘ್ರದಲ್ಲೇ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ, ಸದಸ್ಯರಾದ ಜಗದೀಶ್, ಕೃಷ್ಣಮೂರ್ತಿ, ಬಾಬು, ಪುಷ್ಪಾವತಿ, ತಿಪ್ಪೇಸ್ವಾಮಿ, ಮಹಾದೇವಮ್ಮ ಮುಖಂಡರಾದ ತಿಪ್ಪೇಸ್ವಾಮಿ, ತಿಮ್ಮರಾಯಪ್ಪ ಮುಂತಾದವರು ಉಪಸ್ಥಿತರಿದ್ದರು.