ಕ್ಷೇತ್ರದ ಜನತೆಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ನಡೆಸಲಾಗಿದೆ

ಜಿಲ್ಲಾ ಸುದ್ದಿ

ಕಾಂಗ್ರೆಸ್ ನ ಕಾರ್ಮಿಕ ವಿಭಾಗ ಹಾಗೂ ಹಿರಿಯೂರು ಬ್ಲಾಕ್ ಕಾಂಗ್ರೆಸ್ ನಿಂದ ನೆಹರು ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಹಾಗೂ ಆರೋಗ್ಯ ಮೇಳವು ನಡೆಯಿತು.
ಉದ್ಯೋಗ ಮೇಳದಲ್ಲಿ 40 ಕ್ಕೂ ಹೆಚ್ಚು ಕಂಪನಿಗಳು ಬಂದಿದ್ದು, ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು, ಇವುಗಳಲ್ಲಿ ಸುಮಾರು 180ಜನ ಉದ್ಯೋಗಾಕಾಂಕ್ಷಿಗಳಿಗೆ ಕೆಲಸವನ್ನು ನೀಡುವುದರ ಜೊತೆಗೆ ಆರ್ಡರ್ ಕಾಪಿಯನ್ನು ಕೂಡ ಮಾಜಿ ಸಚಿವ ಡಿ. ಸುಧಾಕರ್ ವಿತರಿಸಿದರು.‌ ಹಾಗೆಯೇ ಆರೋಗ್ಯ ಮೇಳದಲ್ಲಿ ಹಿರಿಯೂರಿನ ವಿವಿಧ ಗ್ರಾಮಗಳಿಂದ ತಪಾಸಣೆಗಾಗಿ ಬಂದಿದ್ದು, ಅವರ ಆರೋಗ್ಯವನ್ನು ವಿಚಾರಿಸಿದರು. ನಂತರ ಕಣ್ಣಿನ ಸಮಸ್ಯೆ ಇರುವವರಿಗೆ ಪರೀಕ್ಷಿಸಿ ಕನ್ನಡಕವನ್ನು ನೀಡಲಾಯಿತು. ಇದೇ ಸಮಯದಲ್ಲಿ‌ ಮಾತನಾಡಿದ, ಸುಧಾಕರ್ ಕಳೆದ ತಿಂಗಳಲ್ಲಿ ಹಿರಿಯೂರಿನಲ್ಲಿ‌ ವಿರೋಧ ಪಕ್ಷದವರು ನಡೆಸಿದ್ದು, ಅದರಿಂದ ಜನರಿಗೆ ಉಪಯೋಗವಾಗಿರಲಿಲ್ಲ, ಆದ್ದರಿಂದ ಮತ್ತೆ ಇಂದು ನಡೆಸಿದ್ದು, 180 ಜನರಿಗೆ ಉದ್ಯೋಗ ಸಿಕ್ಕಿದೆ ಇನ್ನು ಮುಂದೆಯೂ ಕೂಡ ಮೇಳಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು. ಈ ಸಮಯದಲ್ಲಿ ಕಾರ್ಮಿಕ ‌ಕಾಂಗ್ರೆಸ್ ವಿಭಾಗದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ ಗೌಡ, ಜಿಲ್ಲಾಧ್ಯಕ್ಷ ಸಯದ್ ಮೊಹಿದ್ದೀನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್, ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ ಇನ್ನಿತರರು‌ ಇದ್ದರು

 

 

 

Leave a Reply

Your email address will not be published. Required fields are marked *