ವೇದಾಂತ ಮೈನಿಂಗ್ ವಿರುದ್ಧ ಅಂಬೇಡ್ಕರ್ ಸೇನೆ ಹೋರಾಟ

ಜಿಲ್ಲಾ ಸುದ್ದಿ

ಕಾನೂನು ಬಾಹಿರ ಹಾಗೂ ಅಪಾಯಕಾರಿ ಗಣಿಗಾರಿಕೆ ಚಟುವಟಿಕೆಯನ್ನು ವಿರೋಧಿಸಿ ಫೆಬ್ರವರಿ 9 ರಂದು ಚಿತ್ರದುರ್ಗ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ದುರ್ಗಾಂಭಿಕಾ ದೇವಸ್ಥಾನದ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಗ್ರಹ ಹಮ್ಮಿಕೊಂಡಿರುವುದಾಗಿ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಡಾ.ಪಿ.ಮೂರ್ತಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭೀಮಸಮುದ್ರದಲ್ಲಿ ಗಣಿಗಾರಿಕೆ ನಡೆಸುತ್ತಿರುವ ವೇದಾಂತ ಕಂಪನಿ ಬಹಳಷ್ಟು ಅಕ್ರಮವನ್ನು ಎಸಗಿದ್ದಾರೆ. ಇವರು ನಡೆಸುತ್ತಿರುವ ಗಣಿಗಾರಿಕೆಗೆ ಜನರು, ದನಕರುಗಳು ಜೀವುಸುವುದೇ ಕಷ್ಟಕರವಾಗಿದೆ. ಅಲ್ಲದೆ ರಸ್ತೆಯಲ್ಲಿ ಓಡಾಡುವ ಲಾರಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಧೂಳು ಬರುತ್ತಿದೆ. ಇದರಿಂದ ಕುಡಿಯುವ ನೀರು, ಆಹಾರ ಪದಾರ್ಥಗಳು ಮಲಿನವಾಗಿ ಜನರು ದಿನೇ ದಿನೇ ಅನಾರೋಗ್ಯಕ್ಕೆ ಓಳಗಾಗುತ್ತಿದ್ದಾರೆ. ಇವರು ನಡೆಸುತ್ತಿರುವ ಗಣಿಗಾರಿಕೆ ಕಾನೂನಿನ ಎಲ್ಲೆ ಮೀರಿ ಹೋಗಿದೆ. ಈ ಬಗ್ಗೆ ನಮ್ಮ ಸಂಘಟನೆ ಹೋರಾಟ ಮಾಡಲು ಮುಂದಾದರೆ ನ್ಯಾಯಾಲಯದಿಂದ ನಿರ್ಭಂದದ ಆದೇಶ ತರುತ್ತಾರೆ. ಅದರೂ ಇದಕ್ಕೆ ನಾವು ಬಗ್ಗುವುದಿಲ್ಲ. ಇವರ ಅಕ್ರಮವನ್ನು ನೋಡಿಕೊಂಡು ಸಂಘಟನೆ ಸುಮ್ಮನೆ ಕೂರುವುದಿಲ್ಲ. ನಮ್ಮ ಹೋರಾಟ ಜನಪರವಾಗಿದೆ. ಆದ್ದರಿಂದಲೇ ಬರುವ ಫೆಬ್ರವರಿ 9 ರಂದು ಚಿತ್ರದುರ್ಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯಿಂದ ರ್ಯಾಲಿ ಮೂಲಕ ಹೊರಟು ಬೊಮ್ಮೇನಹಳ್ಳಿ ಗ್ರಾಮದ ದುರ್ಗಾಂಭಿಕ ದೇವಸ್ಥಾನದ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಗ್ರಹ ನಡೆಸುತ್ತಿದ್ದೆವೆ ಎಂದರು.
ಕಳೆದ 2019 ರಲ್ಲಿ ದಾವಣಗೆರೆ ಸಂಸದ ಜಿ.ಎಂ.ಸಿದ್ಧೇಶ್ವರ್ ಅವರ ಪತ್ನಿ ಶ್ರೀಮತಿ ಗಾಯಿತ್ರಿ ಅವರು ತಮ್ಮ ನೇತೃತ್ವದಲ್ಲಿ ಗಣಿಗಾರಿಕೆ ಲಾರಿಗಳನ್ನು ನಿಲ್ಲಿಸಬೇಕೆಂದು ಪ್ರತಿಭಟಿಸಿ, ಇದೀಗ ತಮ್ಮ ನೂರಾರು ಲಾರಿಗಳ ಅದಿರು ಸಾಗಿಸುವ ಅವಕಾಶ ಪಡೆದು ಜನಸಾಮಾನ್ಯರಿಗೆ ಮಾರಕವಾಗಿದ್ದಾರೆ ಇಂತಹವರ ವಿರುದ್ದ ನಮ್ಮ ಅಂಬೇಡ್ಕರ್ ಸೇನೆ ನಿರಂತರ ಹೋರಾಟ ಮಾಡಲಿದೆ ಎಂದು ಹೇಳಿದ ಅವರು, ಧರಣಿ ಸತ್ಯಗ್ರಹಕ್ಕೆ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಣಿಬಾಧಿತ ಗ್ರಾಮಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಹೊಳೆಯಪ್ಪ, ವಕೀಲರಾದ ಪ್ರೋ.ಹರಿರಾಮ್, ವಿಶ್ವನಾಥ್ ಪಟ್ಟಿ, ನರಸಿಂಹ ಮೂರ್ತಿ, ಲಿಂಗರಾಜು, ಶ್ರೀನಿವಾಸ್, ಶಶಿಕುಮಾರ್, ಸತೀಶ್ ನಾರಾಯಣ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

 

Leave a Reply

Your email address will not be published. Required fields are marked *