Chitradurga 600 beds for children's in Covid hospital

ಅನುದಾನ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅನಾಥಾಶ್ರಮಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ : ಸಚಿವೆ ಶಶಿಕಲಾ ಜೊಲ್ಲೆ

ಜಿಲ್ಲಾ ಸುದ್ದಿ

ಚಿತ್ರದುರ್ಗ:ಸರ್ಕಾರದ ಅನುದಾನ ಪಡೆದು ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಅನಾಥಾಶ್ರಮಗಳಿಗೆ ದಢೀರ್ ಭೇಟಿ ನೀಡಿ ಕ್ರಮ ತೆಗೆದುಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ವಿಕಲಚೇತನಾ ಇಲಾಖಾಧಿಕಾರಿಗೆ ಸೂಚಿಸಿದರು.

Chitradurga take against who miss use of govt grants to anatahashrama

 

 

 

 

ಅವರು ಮೂರನೇ ಅಲೆ ಸಿದ್ದತೆ ಬಗ್ಗೆ ಹಾಗೂ ಇಲಾಖಾ ಪ್ರಗತಿಯ ಬಗ್ಗೆ ಜಿಪಂ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡುತ್ತಿದ್ದರು.

ಸಭೆಯಲ್ಲಿದ್ದ ಶಾಸಕ ತಿಪ್ಪಾರೆಡ್ಡಿ , ಸರ್ಕಾರದ ಅನುದಾನ ಪಡೆದು ನಡೆಸಲಾಗುತ್ತಿರುವ ಅನಾಥಾಶ್ರಮಗಳಲ್ಲಿ ಸರ್ಕಾರದಿಂದ ನೀಡಲಾಗುತ್ತಿರುವ ಸೌಲತ್ತುಗಳು ಅಲ್ಲಿನ ಅನಾಥರಿಗೆ ಸಿಗುತ್ತಿಲ್ಲ. ಮಹಿಳೆಯಿಬ್ಬರು ಗೋಳಿಡುತ್ತಾ ನನ್ನ ಬಳಿ ಬಂದಿದ್ದರು. ಏನೂ ಕೊಡುತ್ತಿಲ್ಲ ನನಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು. ನಿವೇನು ಮಾಡುತ್ತಿದ್ದಿರಿ ಎಂದು ಅಧಿಕಾರಿ ಯನ್ನು ಪ್ರಶ್ನಿಸಿದರು. ಮಧ್ಯೆ ಪ್ರವೇಶಿಸಿದ ಸಚಿವೆ ಜೊಲ್ಲೆ ಎಲ್ಲಡೆ ನಮ್ಮ ಅನುದಾನ ಪಡೆದು ಅದನ್ನು ದುರುಪಯೋಗ ಮಾಡಿಕೊಳ್ಳುವುದು ನಡೆಯುತ್ತಿದೆ. ನೀವು ಏಸಿ ಕೊಠಡಿಯಲ್ಲಿ ಕುಳಿತರೆ ಸಾಲದು ಫೀಲ್ಡ್ ವಿಸಿಟ್ ಮಾಡಬೇಕು ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಸಂಯುಕ್ತವಾಣಿ

ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ 8660924503

Leave a Reply

Your email address will not be published. Required fields are marked *