ವಿರೋಧ ಪಕ್ಷಗಳಿಗೆ ಶ್ರೀರಾಮುಲು ಹೇಳಿದ್ದೇನು

ಜಿಲ್ಲಾ ಸುದ್ದಿ

ಚಿತ್ರದುರ್ಗ:ವಿರೋಧ ಪಕ್ಷಗಳು ಕೋವಿಡ್ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಮನವಿ ಮಾಡಿದರು.

Chitradurga what Ramulu told opposition parties

 

 

 

 

ದೇಶವೇ ಸಂಕಷ್ಟದ ಸಮಯದಲ್ಲಿ ರುವಾಗ ರಾಜಕಾರಣ ಮಾಡಿದರೆ ನಮ್ಮ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ.ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಮಾಡಬಾರದು. ಕೋವಿಡ್ ಸರಪಳಿ ತುಂಡರಿಸುವ ಚಿಂತನೆಯನ್ನು ಮಾಡಬೇಕು. ನಾನು ಪ್ರತೀ ನಿತ್ಯವೂ ಜಿಲ್ಲಾಧಿಕಾರಿ ಜೊತೆ ದೂರವಾಣಿಯಲ್ಲಿ ಮಾಹಿತಿ ಪಡೆಯುತ್ತಿದ್ದೆನೆ. ಚುನಾವಣೆ ಇದ್ದಿದ್ದರಿಂದ ನಾನು ಜಿಲ್ಲೆಗೆ ಬರಲು ಆಗಲಿಲ್ಲ. ನಾವೆಲ್ಲರೂ ಚುನಾವಣೆ ನಡೆಯಬಾರದು ಎಂದು ಪ್ರಯತ್ನಿಸಿದ್ದು, ಒಂದು ವೇಳೆ ನಡೆದರೆ ನಾವು ಅಲ್ಲಿ ಹೋಗಿ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ್ದೆವು. ಆದರೆ ನಮಗೆ ಚುನಾವಣೆ ತಪ್ಪಿಸಲು ಸಾಧ್ಯವಾಗಲಿಲ್ಲ. ನಾನು ಒಂದು ತಿಂಗಳಿಂದ ಮಾತ್ರ ಜಿಲ್ಲೆಗೆ ಬಂದಿಲ್ಲ. ಯಾವುದೇ ಮಂತ್ರಿಗಳು ಜಿಲ್ಲೆಗೆ ಬಾರದಷ್ಟು ಬಾರಿ ನಾನು ಬಂದಿದ್ದೆನೆ. ಎಲೆಕ್ಷನ್ ಇದ್ದಿದ್ದರಿಂದ ನಾನು ಬರಲಾಗಿಲ್ಲ ಅದನ್ನು ನಾನು ಒಪ್ಪುತ್ತೇನೆ. ಆಕ್ಸಿಜನ್ ವೆಂಟಿಲೇಟರ್ ಕುರಿತು ಎಲ್ಲ ವ್ಯವಸ್ಥೆ ಮಾಡುತ್ತೇನೆ. ಎಲ್ಲವನ್ನು ಸರಿಪಡಿಸುತ್ತೇನೆ ಎಂದು ಹೇಳಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *