ರೈತರ ಕಷ್ಟಗಳು ನಷ್ಟಗಳೇನು ಎಂದು ಯಡಿಯೂರಪ್ಪ ತಿಳಿಯಬೇಕು

ಜಿಲ್ಲಾ ಸುದ್ದಿ

ಚಿತ್ರದುರ್ಗ,ನ09(,ಸಂವಾ)-ಯಡಿಯೂರಪ್ಪ ಚುನಾವಣೆ ಮಂಕಿನಲ್ಲಿದ್ದರೆ ಆಗೋದಿಲ್ಲ ಅದರಿಂದ ಹೊರಗೆ  ಬಂದು ರೈತರ ಕಣ್ಟಗಳೇನು ‌ನಷ್ಟಗಳೇನು ಎಂದು ತಿಳಿದುಕೊಳ್ಳಬೇಕು.ಆಗ ಮಾತ್ರ ಸರ್ಕಾರ ಬದುಕಿದೆಯೋ ಸತ್ತಿದೆಯೋ ಎಂದು ತಿಳಿಯೋದು ಆದರೆ ಇವರಿಗೆ ಚುನಾವಣೆಯಲ್ಲಿ ಮತಗಳಿಸೋದು  ನಂತರ ದೋಚೋದು ಇದು ಮುಖ್ಯ ರೈತರು ಮುಖ್ಯ ಅಲ್ಲ ಎಂದು ರೈತ ಮುಖಂಡ ಕೋಡಿ ಹಳ್ಳಿ ಚಂದ್ರ  ಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

Chitradurga farmar samavesha

 

 

 

ಅವರು  ಚಿತ್ರದುರ್ಗ ಜಿಲ್ಲೆ
ಹಿರಿಯೂರಿನಲ್ಲಿ ಮಾಧ್ಯಮಗಳೊಂದಿಗೆ  ಮಾತನಾಡಿದರು.

ಕೋರೋನಾ ಸಮಯದಲ್ಲಿ ರೈತ ಸಂಕುಲವನ್ನು ನಾಶ ಮಾಡುವಂತಹ ಕಾಯ್ದೆಗಳನ್ನು ಭಾರತ ಸರ್ಕಾರ ಜಾರಿಗೆ ತಂದಿದ್ದು ಅದನ್ನು ಎದುರಿಸುವ ಸಲುವಾಗಿ  ಈ ಸಮಾವೇಶವ‌ನ್ನು ಮಾಡಲಾಗುತ್ತಿದೆ ಎಂದು ರೈತ ಮುಖಂಡ ಕೋಡಿ ಹಳ್ಳಿ ಚಂದ್ರಶೇಖರ್ ಹೇಳಿದರು.
ಕೋರೋನಾ ಸಮಯದಲ್ಲಿ ನಷ್ಟಕ್ಕೊಳಗದ ರೈತರಿಗೆ ಪರಿಹಾರದ ರೂಪದಲ್ಲಿ ಯಡಿಯೂರಪ್ಪ‌ ನೀಡಿರುವ ಮೊತ್ತ ಅಲ್ಪ. ಇದನ್ನು ಸರಿತೂಗಿಸಲು ಅವರ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು ಪರಿಹಾರ ನೀಡಬೇಕಾಗಿತ್ತು ಅದು‌ ನಡೆದಿಲ್ಲ. ತಮಗೆ ಹೇಗೆ ಬೇಕೋ ಹಾಗೆ ರಾಜಕೀಯವಾಗಿ  ಮತ ಪಡೆದು ವಂಚನೆ ಮಾಡುತ್ತಾ  ಮತ್ತೆ  ಐದು ವರ್ಷಕ್ಕೆ ಮುಂದೆ ತಳ್ಳುತ್ತಾ ಬರುತ್ತಿವೆ. ಇದಕ್ಕೆ ಜನರಲ್ಲಿ ಜಾಗೃತಿ ಇರಬೇಕು ಆಗ ಎಲ್ಲವೂ ಸರಿಯಾಗುತ್ತದೆ. ಎಂದು ಕೋಡಿ ಹಳ್ಳಿ ಚಂದ್ರಶೇಖರ್ ಆಕ್ರೋಶದಿಂದ ಹೇಳಿದರು.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *