ಚಿತ್ರದುರ್ಗ,ನ: ವಿಧಾನ ಸೌಧದಲ್ಲಿರುವಹಾಗೂ ಅದರ ಸುತ್ತ ಮುತ್ತಲಿರುವ ಮುಠ್ಠಾಳಿಗೆ ಬರಲಿ ಕೋರೋನಾ ನಮಗ್ಯಾರಿಗು ಬರೋದು ಬೇಡ ಎಂದು ರೈತ ಮುಖಂಡ ಕೋಡಿ ಹಳ್ಳಿ ಚಂದ್ರ ಶೇಖರ್ ಕಿಡಿ ಕಾರಿದರು.
ಅವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ನಡೆದ ರೈತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೋರೋನಾ ಕಾಲದಲ್ಲಿ ರಾಜ್ಯ ದೇಶದ ಜನರನ್ನು ಭಯಕ್ಕೋಳಪಡಿಸಿದರು. ನಂತರ ಲಾಕ್ ಡೌನ್ ಮಾಡಿ ರಾಜ್ಯ ಹಾಗೂ ದೇಶದ ಆರ್ಥಿಕ ಸ್ಥಿತಿಯನ್ನು ದಿವಾಳಿಯಾಗುವಂತೆ ಮಾಡಿದರು. ದೇಶದ ಚೀನಾ ಗಢಿಯಲ್ಲಿ ಚೀನಿ ಸೈನಿಕರು ಮುತ್ತಿಗೆ ಹಾಕಿದಾಗ ಅವರನ್ನು ಹಾಗೂ ಕೋರೋನಾ ಓಡಿಸುವ ನಿಟ್ಟಿಲ್ಲಿ ಪರಿಹಾರ ಹುಡುಕಬೇಕಾದವರು ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಎಂಎಸ್ ಬಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದರು. ಎಂದು ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ