ಮೈಸೂರು,- ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಎಂಬ ಕ್ರೇಜ್ ಹೆಚ್ಚಾಗುತ್ತಲೆ ಹೋಗುತ್ತಿದೆ. ಮದುವೆಗೂ ಮುನ್ನ ವಧು ವರ ಇಬ್ಬರೂ ಕೂಡಿ ಸುಂದರ ತಾಣಗಳಿಗಲ್ಲಿ ಫೋಟೋ ಶೂಟ್ ನಲ್ಲಿ ವಿವಿಧ ಬಗೆ
ಗಳಲ್ಲಿ ತಮಗಿಷ್ಟವಾದ ಫೋಟೋಗಳನ್ನು ತೆಗೆಸಿಕೊಳ್ಳುತ್ತಾರೆ. ಹಾಗೂ ವಿಡಿಯೋ ಚಿತ್ರೀಕರಣ ಕೂಡ ಮಾಡಿಸುತ್ತಾರೆ. ಇಂತಹ ಫೋಟೋ ಹಾಗೂ ವಿಡಿಯೋದ ಪ್ರೀ ವೆಡ್ಡಿಂಗ್ ಶೂಟ್ ಗೆ ಹೋಗಿದ್ದ ವಧು-ವರ ಇಬ್ಬರು ದುರಂತ ಅಂತ್ಯ ಕಂಡಿದ್ದಾರೆ.
ಮೈಸೂರಿನ ಕ್ಯಾತಮಾರನಹಳ್ಳಿಯ ಚಂದ್ರು ಹಾಗೂ ಶಶಿಕಲಾ ಇಬ್ಬರ ಮದುವೆಯೂ ನವೆಂಬರ್ 22 ರಂದು ನಡೆಯವುದಾಗಿ ನಿಶ್ಚಯವಾಗಿತ್ತು. ಇದರ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಹಾಗೂ ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದರು. ಆಗ ಇವರಿಬ್ಬರು ಇದ್ದ ತೆಪ್ಪ ಮುಗುಚಿ ವಧು- ವರ ನೀರು ಪಾಲಾಗುವ ಮೂಲಕ
ಮದುವೆಗೂ ಸಾವಿಗೀಡಾಗಿದ್ದಾರೆ.
ತೆಪ್ಪ ನೆಡೆಸುತ್ತಿದ್ದ ವ್ಯಕ್ತಿ ಈಜಿ ದಡ ಸೇರಿದ್ದಾನೆ. ತಲಕಾಡು ಪೋಲಿಸರು ತಜ್ಞರ ಸಹಾಯದಿಂದ ಮೃತ ದೇಹಗಳನ್ನು ಹೊರಗೆ ತೆಗೆದಿದ್ದಾರೆ.ಘಟನೆಯ ವಾಸ್ತವ: ಶಶಿಕಲಾ ಹಾಗೂ ಚಂದ್ರು ಇಬ್ಬರು ಪ್ರೀ ವೆಡ್ಡಿಂಗ್ ನ ಫೋಟೋಗಳು ಹಾಗೂ ವೀಡಿಯೋದ ಚಿತ್ರೀಕರಣ ಮುಗಿಸಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದೆ ವರ ಚಂದ್ರು ಛಾಯಾಗ್ರಹಕನಿಗೆ ಮತ್ತಷ್ಟು ಫೋಟೋ ತೆಗೆಯುವಂತೆ ಕೇಳಿ ಬಲವಂತ ಮಾಡಿದ್ದಾನೆ. ಇದಕ್ಕೆ ಒಪ್ಪದ ಛಾಯಾಗ್ರಹಕನಿಗೆ ಹೆಚ್ಚಿನ ಹಣ ಕೊಟ್ಟು ತೆಪ್ಪವೇರಿ ನದಿಯ ಆ ಕಡೆಯ ದಡದವೆರೆಗೂ ಹೋಗಿದ್ದಾರೆ. ವರ ಚಂದ್ರು ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಒಂದು ಕಡೆಗೆ ವಾಲಿದಾಗ ತೆಪ್ಪ ಆಯಾ ತಪ್ಪಿ ವಾಲಿದೆ ಇದರಿಂದ ವಧುವಿನ ಅಕ್ಕ ತಮ್ಮ ಹಾಗೂ ಛಾಯಾಗ್ರಹಕರ ಕಣ್ಣೆದುರಲ್ಲೆ ದುರಂತ ಅಂತ್ಯ ಕಂಡು ಹಸೆ ಮಣೆ ಏರುವ ಮುನ್ನವೇ ವಧು- ವರ ನೀರು ಪಾಲಾಗಿ ಸಾವನ್ನಪ್ಪಿದ್ದಾರೆ.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ