ಬೆಂಗಳೂರಿನಲ್ಲಿ ರೈತರ ನಾಳಿನ ಹೋರಾಟ ಹೇಗಿರುತ್ತೆ?

ಜಿಲ್ಲಾ ಸುದ್ದಿ ರಾಜ್ಯ

ಬೆಂಗಳೂರು: ಭಾರತ್ ಬಂದ್ ನಂತರ ಕೋಡಿ‌ಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ 10 ಸಾವಿರ ರೈತರು ನಾಳೆ ವಿಧಾನ ಸೌಧ ಮುತ್ತಿಗೆ ಹಾಕಲಿದ್ದಾರೆ.Chitradurga how  is farmers  tommorow protest

 

 

 

ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಇಂದು ರೈತ ವಿರೋಧಿ ಕಾಯ್ದೆಗಳ ವಿರೋಧಿಸಿ ಭಾರತ್ ಬಂದ್ ನ್ನ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಸೇರಿದಂತೆ ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದವು.
ನಾಳೆ ಇದರ ಮುಂದುವರೆದ ಭಾಗವಾಗಿ ರೈತ ನಾಯಕ ಕೋಡಿ ಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ವಿಧಾನ ಸೌಧ ಮುತ್ತಿಗೆಯು ಹಾಕಲಿದೆ. ಕೋಡಿ ಹಳ್ಳಿ ಚಂದ್ರ ಶೇಖರ್ ಹೇಳಿರುವಂತೆ ದಪ್ಪ ಚರ್ಮದ ರಾಜಕಾರಣಿಗಳಿಗೆ ಬುದ್ದಿ ಕಲಿಸಲು ಚಳುವಳಿ
ನಡೆಸಲಾಗುತ್ತದೆ. ನಾಡಿನ ವಿವಿಧ ಜಿಲ್ಲೆಗಳಿಗೆ ಬೆಂಗಳೂರಿಗೆ ಸು‌ಮಾರು ೧೦ ಸಾವಿರ ಜನ ರೈತರು ಬಂದು ಸೇರಲಿದ್ದಾರೆ. ಸಂಗೋಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ರ್ಯಾಲಿ ಹೊರಡಲಿದೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *