ಡಿ. 6 ರಂದು ಭೀಮ ಜ್ಯೋತಿ ನಮನ ಕಾರ್ಯಕ್ರಮ ಬನ್ನಿ

ಜಿಲ್ಲಾ ಸುದ್ದಿ

ಭೀಯ ಯಾತ್ರೆ ಬಳಗದಿಂದ ಡಿ. 6 ರಂದು ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಚಿತ್ರದುರ್ಗದಲ್ಲಿ ಭೀಮ ಜ್ಞಾನ ಜ್ಯೋತಿ ನಮನ ಕಾರ್ಯಕ್ರಮವನ್ನಾಗಿ ಆಚರಿಸುತ್ತದೆ ಎಂದು ಭೀಮ ಬಳಗದ ಅಧ್ಯಕ್ಷ ರವೀಂದ್ರ ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಡಿ. 6 ರಂದು ಸಂಜೆ ಗಾಂಧಿ ಸರ್ಕಲ್ ನಿಂದ ಭೀಮ ಜ್ಯೋತಿ ಆರಂಭವಾಗಲಿದ್ದು, ಬುದ್ದ ಬಸವ ಮತ್ತು ಭೀಮಾಭಿಮಾನಿಗಳು ಹಾಗೂ ಸಾರ್ವಜನಿಕರು ಮನೆಗಳಿಂದ ದೀಪ ಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಬಂದು ಅಂಬೇಡ್ಕರ್ ಪುತ್ಥಳಿಗೆ ನಮನ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಸಮಯದಲ್ಲಿ ಬಳಗದ ಸದಸ್ಯರು ಮತ್ತು ವಕೀಲರುಗಳಾದ ಜಿ. ಶರಣಪ್ಪ, ಸಿಎಸ್ ರವೀಂದ್ರ, ಈಎಸ್ ರವಿಕುಮಾರ್, ಹಾಗೂ ಮುಖಂಡರುಗಳಾದ ಡಿ.‌ಕುಮಾರಸ್ವಾಮಿ, ಟಿ. ಸತೀಶ್, ಆರ್ ಪ್ರಕಾಶ್, ಎಸ್. ಮಂಜಣ್ಣ, ಜೆಜೆ ಹಟ್ಟಿ ಟಿ. ರಘು, ಕೃಷ್ಣಮೂರ್ತಿ, ಹೆಚ್. ನಟರಾಜ್ ಇದ್ದರು.

 

 

 

Leave a Reply

Your email address will not be published. Required fields are marked *