ಡಿ- 26 ರಂದು ಕುಡು ಒಕ್ಕಲಿಗೆ ಸಮುದಾಯಕ್ಕೆ 3ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಸಿ.ಎಂ ಬೊಮ್ಮಾಯಿ ಅವರಿಗೆ ಮನವಿ.
ಹುಣಸಗಿ: ಕರ್ನಾಟಕ ರಾಜ್ಯ ಕುಡು ಒಕ್ಕಲಿಗ ಅಭಿವೃದ್ಧಿ ಸೇವಾ ಸಂಘದ ವತಿಯಿಂದ ಕುಡು ಒಕ್ಕಲಿಗ ಸಮುದಾಯಕ್ಕೆ ಇದುವರೆಗೂ ಸರ್ಕಾರದ ಗೆಜೆಟ್ ಅಲ್ಲಿ ಮೀಸಲಾತಿ ಕಲ್ಪಿಸದೇ ಇರುವುದರಿಂದ ಸದರಿ ಸಮುದಾಯವು ಸರಕಾರದ ವಿವಿಧ ಯೋಜನೆಗಳನ್ನು ಪಡೆಯುವಲ್ಲಿ ವಂಚಿತವಾಗಿದೆ. ಇದಲ್ಲದೇ ಹಲವು ಬಾರಿ ಮನವಿ ಪತ್ರವನ್ನು ನೀಡಿದರೂ ಕೂಡಾ ಇದುವರೆಗೆ ಸರಕಾರವು ನಮ್ಮ ಸಮಾಜವನ್ನು ಕಡೆಗಣಿಸುತ್ತಿದೆ
ಆದ್ದರಿಂದ ನಮ್ಮ ಸಮಾಜದ ಬೆಳವಣಿಗೆಗಾಗಿ ಮತ್ತು ಸರಕಾರದ ಜಾತಿ ಪಟ್ಟಿಯಲ್ಲಿ ಮೀಸಲಾತಿ ಪಡೆಯುವ ಸಲುವಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕುಡು ಒಕ್ಕಲಿಗರ ಸಮಾಜಕ್ಕೆ ಪ್ರವರ್ಗ- 3ಎ ಮೀಸಲಾತಿ ಕಲ್ಪಿಸುವ ಮೂಲಕ ಸಮಾಜಕ್ಕೆ ಹಿಂದುಳಿದ ವರ್ಗಗಳ ಜಾತಿಪಟ್ಟಿಯಲ್ಲಿ ಕುಡು ಒಕ್ಕಲಿಗ ಎಂದು ಸೇರ್ಪಡೆಗೊಳಿಸಿ ಸಮಾಜಕ್ಕೆ ಸರಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಅನುಕೂಲ ಮಾಡಿಕೊಡಬೇಕೆಂಉ ಸಿ.ಎಂ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಿದ್ದು ಈ ಒಂದು ಮನವಿಯನ್ನು ಸಲ್ಲಿಸಲು ಕುಡು ಒಕ್ಕಲಿಗ ಸಮಾಜವು ಇದೇ 26 ರಂದು “ಬೆಳಗಾವಿ ಚಲೋ” ಹಮ್ಮಿಕೊಂಡಿದ್ದು ಈ ನಮ್ಮ ಹಕ್ಕನ್ನು ಪಡೆಯಲು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಲಬುರಗಿ ಜಿಲ್ಲಾ ಕುಡು ಒಕ್ಕಲಿಗ ಸಮಾಜದ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.