ದಸರಾ ಕ್ರೀಡೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದ ಕೋಟೆ ನಾಡಿನ ಯುವಕ

ರಾಜ್ಯ

ಮೈಸೂರು ದಸರಾದ ಕ್ರೀಡೆಯಲ್ಲಿ ವಿವಿಧ ಕ್ರೀಡೆಗಳನ್ನು ಪ್ರತೀ ವರ್ಷವೂ ಆಯೋಜಿಸಲಾಗುತ್ತದೆ. ಇದರಲ್ಲಿ ಭಾಗವಹಿಸಿ‌ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುವ ಕನಸನ್ನು ಬಹುತೇಕ‌ ಕ್ರೀಡಾಪಟುಗಳು ಕಂಡಿರುತ್ತಾರೆ. ಇಂತಹ ಕನಸನ್ನು ಹೊತ್ತು ಸಾಕಷ್ಟು‌ ಪರಿಶ್ರಮದಿಂದ ಸಾಧನೆ ಮಾಡಿದ್ದ ಕೋಟೆ ನಾಡಿನ ಯುವ ಕ್ರೀಡಾ ಪಟು ಮಂಜುನಾಥ್ ‌ಬಳೇಗಾರ್ ಹಲವು ವರ್ಷಗಳಿಂದ ದೇಹ ದಾರ್ಢ್ಯ ಸ್ಪರ್ಧೆಯಲ್ಲಿ ಭಾವಹಿಸಿದ್ದಾರೆ. ಇದರಲ್ಲಿ ಯಶಸ್ಸು ಕಂಡಿರುವ ಮಂಜುನಾಥ್ ಬೆಳ್ಳಿ‌ ಪದಕವನ್ನು ಗಳಿಸುವ ಮೂಲಕ ತನ್ನ ಕನಸನ್ನು‌ ಸಾಕಾರಗೊಳಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಹಲವು ಖಾಸಗಿ‌ ಟೀವಿ ವಾಹಿನಿಗಳಲ್ಲಿ ಕ್ಯಾಮರಾಮನ್ ಆಗಿ ಕೆಲಸ ಮಾಡಿದ್ದ ಇವರು ಫೋಟೋ ಗ್ರಫಿಯಲ್ಲಿಯೂ ಕೂಡ ಅತ್ತ್ಯುತ್ತಮ ಕಲೆಯನ್ನು ಹೊಂದಿದ್ದು, ಅದನ್ನೇ ತನ್ನ ವೃತ್ತಿಯಾಗಿಸಿಕೊಂಡಿದ್ದಾರೆ.ಇದರ ಜೊತೆಗೆ ದೇಹ ದಾರ್ಢ್ಯದ ತರಬೇತಿಯನ್ನು ಪಡೆದು ಮೈಸೂರು ದಸರಾದಲ್ಲಿ ಭಾಗ ವಹಿಸಿ ಮೊದಲನೇ ವರ್ಷದಲ್ಲಿಯೇ ಬೆಳ್ಳಿ‌ಪದಕ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿಯನ್ನು‌ ತಂದಿದ್ದಾರೆ

 

 

 

Leave a Reply

Your email address will not be published. Required fields are marked *