ಚುನಾವಣೆಯ ದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬಿಜೆಪಿ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂಬ ದಟ್ಟವಾದ ಸುದ್ದಿ ಕೇಳಿಬಂದಿದೆ.
ಇದಕ್ಕಾಗಿ ಅಮಿತ್ ಷಾ ಕೂಡ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸಚಿವ ಸ್ಥಾನದ ಪಟ್ಟಿಯಲ್ಲಿ ಲಂಚದ ಆರೋಪ ಹೊತ್ತು ಸಚಿವ ಸ್ಥಾನದಿಂದ ಕೆಳಗಿಳಿದಿದ್ದ ಹಿರಿಯ ಸಚಿವ ಕೆ ಎಸ್ ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮತ್ತು ಸಿಪಿ ಯೋಗೇಶ್ವರ್ ಇವರುಗಳು ಇದ್ದಾರೆ. ಪ್ರಮುಖ ಮೂರು ಸಮೂದಾಯಗಳಾದ ಕುರುಬ ಒಕ್ಕಲಿಗ ಹಾಗೂ ನಾಯಕರ ಮತಗಳನ್ನು ಸೆಳೆಯಲು ಈ ತಂತ್ರವನ್ನು ಬಿಜೆಪಿ ಮುಖಂಡರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಯಾರಿಗೆ ಹೊಸ ವರ್ಷ ಸಂಕ್ರಾಂತಿಯ ಸಿಹಿ ಸುದ್ದಿ ಯಾರಿಗೆ ಕಹಿ ಸಿಗಲಿದೆ ಎಂದು ಕಾದು ನೋಡಬೇಕಿದೆ.