ಚಳ್ಳಕೆರೆ ತಾಲೂಕಿನ ಹಾಲಗೊಂಡನಹಳ್ಳಿಯ ವೇದಾವತಿ ನದಿಯಲ್ಲಿ ಮುಳುಗಿ ಮಹಿಳೆಯ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಹನುಮಕ್ಕ 62 ಎಂದು ಗುರುತಿಸಲಾಗಿದೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಚಳ್ಳಕೆರೆ ತಹಶೀಲ್ದಾರ್ ಹಾಗೂ ಪರುಶುರಾಂಪುರ ಠಾಣೆ ಪಿಎಸ್ಐ ಸ್ವಾತಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ತಹಶೀಲ್ದಾರ್ ರಘು ಮೂರ್ತಿ, ಕಳೆದ ಒಂದು ವಾರದಿಂದ ಸುತಿಯುತ್ತಿರುವ ಮಳೆಯಿಂದಾಗಿ ವೇದಾವತಿ ನದಿ ತುಂಬಿ ಹರಿಯುತ್ತಿದೆ. ನದಿ ಪಾತ್ರ ದಲ್ಲಿರುವ ಜನರು ಜಾಗರೂಕತೆಯಿಂದ ಇರಬೇಕು, ತಮ್ಮ ದಿನಿತ್ಯದ ಪ್ರತಿಯೊಂದು ಬಳಸುವಂತಹ ವಸ್ತುಗಳನ್ನು ಆಗಲಿ ಮನೆಯ ಮಕ್ಕಳು, ವಯೋವೃದ್ದರನ್ನಾಗಲಿ ನದಿಗೆ ಇಳಿಸಬಾರದು, ನದಿಯಲ್ಲಿರುವ ಪ್ರವಾಹ ಕಡಿಮೆ ಆಗುವವರೆಗೂ ಈ ನದಿಯನ್ನು ಆಶ್ರಯಿಸುವಂತಹ ಕೆಲಸ ಬಿಡಬೇಕು.ಗ್ರಾಮದಲ್ಲಿರುವ ಯುವಕರು, ವಿದ್ಯಾರ್ಥಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗುಜ್ಜಾರಪ್ಪ,ಗ್ರಾಮ ಲೆಕ್ಕಾಧಿಕಾರಿ ಹಿರಿಯಣ್ಣ ಮತ್ತು ಗ್ರಾಮಸ್ಥರು ಇದ್ದರು