ಸರ್ಕಾರ ಮೊಟ್ಟ ಮೊದಲ ಬಾರಿಗೆ ನೂಲಿಯ ಚಂದಯ್ಯ ಅವರ ಜಯಂತಿಯನ್ನು ಸರ್ಕಾರ ವತಿಯಿಂದ ಆಚರಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದು, ಸರ್ಕಾರದ ಆದೇಶದಂತೆ ಇದೇ 12 ರಂದು ಜಯಂತಿಯನ್ನು ನಗರದ ತರಾಸು ರಂಗ ಮಂದಿರದಲ್ಲಿ ಮೊಟ್ಟ ಮೊದಲಬಾರಿಗೆ ಆಚರಿಸಲಾಗುತ್ತಿದೆ.
ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ನೂಲಿಯ ಚಂದಯ್ಯ ಅವರ ಬಾವಚಿತ್ರದೊಂದಿಗೆ ಮರೆವಣಿಗೆಯೂ ತರಾಸು ರಂಗ ಮಂದಿರಕ್ಕೆ ತರೆಳಲಿದೆ. ಕಾರ್ಯಕ್ರಮವು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸುತ್ತಿದ್ದು, ಸಾನಿಧ್ಯವನ್ನು ಮುರುಘಾ ಶರಣರು ವಹಿಸುತ್ತಿದ್ದಾರೆ, ಇವರ ಜೊತೆಯಲ್ಲಿ ಜನ ಪ್ರತಿನಿಧಿಗಳು, ಜಿಲ್ಲಾಡಳಿತ ಭಾಗವಹಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಭಾವಗಹಿಸುವಂತೆ ಮುಖಂಡರು ಕೋರಿದ್ದಾರೆ