ಚಿತ್ರದುರ್ಗ ಕೋಟೆ ನಾಡಲ್ಲಿ ಗುಡುಗಿದ ಜೆಸಿಬಿ
ಕೋಟೆ ನಾಡಿನಲ್ಲಿ ಅವೈಜ್ಞಾನಿಕ ಡಿವೈಡರ್ ಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ನಂತರ ಶಾಸಕ ವೀರೇಂದ್ರ ಪಪ್ಪಿ ಅವರು ಅಧಿವೇಶನದಲ್ಲಿ ಅವೈಜ್ಞಾನಿಕ ಡಿವೈಡರ್ ತೆರವುಗೊಳಿಸುವ ಕುರಿತು ಗಮನ ಹರಿಸಿದ್ದರು. ಇದಕ್ಕೆ ಮಧ್ಯ ರಾತ್ರಿ ಚಾಲನೆ ಸಿಕ್ಕಿದೆ. ಶಾಸಕ ವೀರೇಂದ್ರ ಪಪ್ಪಿ ಹಾಗು ನಗರಸಭೆ ಆಯುಕ್ತೆ ರೇಣುಕಾ ನೇತೃತ್ವದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಜೆಸಿಬಿಯಿಂದ ಡಿವೈಡರ್ ಹೊಡೆದು ಹಾಕಲಾಯಿತು. ನಂತರ ಆರ್ ಟಿಓ ಕಚೇರಿಯಿಂದ ತೋಟಗಾರಿಕೆ ಇಲಾಖೆ ಹೋಗುವ ಮಾರ್ಗದ ಡಿವೈಡರ್ ಕೂಡ ತೆರವು ಗೊಳಿಸಲಾಯಿತು. ಮಧ್ಯ ರಾತ್ರಿಯಿಂದ ತೆರವಿಗೆ ಚಾಲನೆಗೊಂಡಿದ್ದು, ಶಾಸಕ ವೀರೇಂದ್ರಪಪ್ಪಿ ಅವರನ್ನು ಅಭಿಮಾನಿಗಳು ಹೆಗಲ ಮೇಲೆತ್ತಿ ಕುಣಿದಾಡಿದರು. ಚುನಾವಣೆ ಸಮಯದಲ್ಲಿ ಶಾಸಕ ವೀರೇಂದ್ರ ಪಪ್ಪಿ ಅವರು ಅವೈಜ್ಞಾನಿಕ ಡಿವೈಡರ್ ತೆರವಿನ ಬಗ್ಗೆ ಭರವಸೆ ನೀಡಿದ್ದರು.