ಶಿಮೊಗ್ಗದಲ್ಲಿ ರಾಜಕೀಯ ಮೇಲಾಟ ಶುರುವಾಗಿದೆ. ಕಟ್ಟಾ ಹಿಂದುತ್ವ ವಾದಿ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷದ ಮೇಲೆ ಮುನಿಸಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ತೀರ್ಮಾನ ಮಾಡಿ ಘೋಷಣೆ ಮಾಡಿದ್ದಾರೆ. ಅವರು ಶಿವಮೊಗ್ಗದ ಬಂಜಾರ ಭವನದಲ್ಲಿ ನಡೆದ ರಾಷ್ಟ್ರ ಭಕ್ತರ ಬಳಗ ಕರೆದಿದ್ದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಈ ಮಹತ್ವದ ಘೋಷಣೆ ಮಾಡಿದರು. ಶಿವಮೊಗ್ಗ ದಲ್ಲಿ ಮಾಜಿ ಸಿಎಂ ಪುತ್ರ ಬಿವೈ ರಾಘವೇಂದ್ರ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ. ಲೋಕಸಭಾ ಟಿಕೆಟ್ ಲೈ ತಪ್ಪುತ್ತಿದ್ದಂತೆ ಈಶ್ವರಪ್ಪ ಬೆಂಕಿ ಬಿರುಗಾಳಿಯಾಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ನೇರವಾಗಿ ತೊಡೆ ತಟ್ಟಿದ್ದಾರೆ. ಹಿಂದೆ ಬಿಜೆಪಿ ನಾಯಕರ ಬಳಿ ಬೇರೆಯವರ ಮಕ್ಕಳಿಗೆ ಟಿಕೆಟ್ ಕೊಡುತ್ತಿದ್ದೀರಿ ಎಂದಾಗ ನಿಮಗೂ ಕಾಂತೇಶ್ ಗೂ ಭವಿಷ್ಯವಿದೆ ಎಂದಿದ್ದರು. ಕಾಂತೇಶ್ ಹಾವೇರಿಯಿಂದ ಸ್ಪರ್ಧಿಸುತ್ತೇನೆ ಎಂದಾಗ ಟಿಕೆಟ್ ಕೊಡಿಸಿಗೆಲ್ಲಿಸುವ ಜವಾಬ್ದಾರಿ ನನ್ನದು ಎಂದಿದ್ದ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಹಾಗೂ ಶೋಭಾ ಕರಾಂದ್ಲಾಜೆ ಟಿಕೆಟ್ ಗೆ ಪಟ್ಟು ಹಿಡಿದಿರುವುದು ಬಹಿರಂಗವಾಗಿತ್ತು. ಈ ಇಬ್ಬರ ಮೇಲೆ ತೋರಿಸಿದ ಪ್ರೀತಿ ಕಾಳಜಿ ಕಾಂತೇಶ್ ಮೇಲೆ ಯಾಕೆ ತೋರಿಸಲಿಲ್ಲ ಎಂದು ಕಿಡಿ ಕಾರಿದರು. ಹೀಗೆ ಸಭೆಯುದ್ದಕ್ಕೂ ಯಡಿಯೂರಪ್ಪ ಮೇಲೆ ಬೆಂಕಿಯುಂಡೆಗಳನ್ನೆ ಉಗುಳಿದರು.