ಬೆಂಗಳೂರು: ಸಿಎಂ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್ ರಾಗಿದ್ದ ಮಹದೇವ್ ಪ್ರಕಾಶ್ ಅವರು ವೈಯುಕ್ತಿಕ ಕಾರಣ ಕೊಟ್ಟು ತಮ್ಮ ಹುದ್ದೆಗೆ ನೀಡಿರುವ ರಾಜೀನಾಮೆ ವಿಚಾರ ನಿಗೂಢವಾಗಿದೆ.
ಸುಮಾರು 46 ವರ್ಷಗಳ ಪತ್ರಿಕೋದ್ಯಮದ ಅನುಭವವಿರುವ ಮಹದೇವ್ ಪ್ರಕಾಶ್ ಇದೀಗ ವೈಯುಕ್ತಿಕಕಾರಣಕ್ಕೆ ಸಿಎಂ ಮಾಧ್ಯಮ ಸಲಹೆಗಾರ ಹುದ್ದೆಗೆ ಏಕಾಎಕಿ ರಾಜೀನಾಮೆ ಸಲ್ಲಿಸಿ ಪತ್ರವನ್ನು ಸಿಎಂ ಗೆ ಬರೆದಿದ್ದಾರೆ. ಈ ಹಿಂದೆ ಇನ್ನೊಬ್ಬ ಹಿರಿಯ ಹಾಗು ಅನುಭವಿ ಪತ್ರಕರ್ತರು ಆಗಿದ್ದ ಮರಮಕಲ್ ಅವರನ್ನು ರಾಜಕೀಯ ಸಲಹೆಗಾರರ ಹುದ್ದೆಯಿಂದ ಕಿಕ್ ಔಟ್ ಮಾಡಲಾಗಿತ್ತು. ಇದರ ಹಿಂದೆ ಸಿಎಂ ಪುತ್ರ ವಿಜಯೇಂದ್ರ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಇಂದು ಮಹದೇವ್ ಪ್ರಕಾಶ್ ಕೂಡ ರಾಜೀನಾಮೆ ನೀಡಿರುವುದು ಕೂಡ ಮತ್ತೊಂದು ಚರ್ಚೆಗೆ ಕಾರಣವಾಗಿದೆ.
ಸಂಯುಕ್ತವಾಣಿ