ಚಿತ್ರದುರ್ಗ: ಅನ್ ಲೈನ್ ನಲ್ಲಿ ಅಗತ್ಯ ವಸ್ತುಗಳನ್ನು ಬುಕ್ಮಾಡಿ ಖರೀದಿಸುವುದು ಈಗ ಸಮಾನ್ಯದ ಸಂಗತಿ ಆದರೆ ಇದರಲ್ಲಿಮೋಸ ಹೋಗುವವರ ಸಂಖ್ಯೆಯೂ ಕೂಡ ಕಡಿಮೆ ಏನಿಲ್ಲ. ಇಂತಹ ಘಟನೆಯೊಂದು ಬೆಳಕಿಗೆ ಬಂದಿದೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ನರಸಿಂಹಮೂರ್ತಿ ಎಂಬ ಯುವಕ ಆನ್ ಲೈನ್ ನಲ್ಲಿ ಮೊಬೈಲ್ ಖರೀದಿಸಿದ್ದರು. ಮೊಬೈಲ್ 1, 700 ರೂಪಾಯಿ ಮೌಲ್ಯದ್ದಾಗಿದೆ. ನರಸಿಂಹ ಮೂರ್ತಿ ಬುಕ್ ಮಾಡಿ ಒಂದು ವಾರದ ನಂತರ ಮನೆ ಬಾಗಿಲಿಗೆ ಬಂದ ಪಾರ್ಸಲ್ ನ್ನು ಹಣ ಕೊಟ್ಟು ಬಾಕ್ಸ್ ಬಿಚ್ಚಿ ನೋಡಿದರೆ ಅಚ್ಚರಿ ಕಾದಿತ್ತು.ಅದರಲ್ಲಿ ಸೋಂಪಾಪಡಿ ಸಹಿಯೂ ಇತ್ತು. ಅನ್ ಲೈನ್ ಸಂಸ್ಥೆಯೂ ಮೋಬೈಲ್ ಬುಕ್ ಮಾಡಿದ ಯುವಕನಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ.
ಸಂಯುಕ್ತವಾಣಿ