ಚಿತ್ರದುರ್ಗದ ಗಾಂಧಿನ ನಗರದ ಬಿಸಿಎಂ, ಎಸ್ಸಿ ಎಸ್ಟಿ ಬಾಲಕಿಯರ ಹಾಸ್ಟೆಲ್ ಗೆ ಭೇಟಿ ನೀಡಿದ ಸಿಇಓ ವಿದ್ಯಾರ್ಥಿ ನಿಲಯಗಳ ಇಬ್ಬರು ವಾರ್ಡನ್ ಗಳ ಮೇಲೆ ಶಿಸ್ತುಕ್ರಮ ಜರುಗಿಸಲು ಶಿಫಾರಸ್ಸು ಮಾಡುವಂತೆ ಸೂಚಿಸಿದರು.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂಎಸ್ ದಿವಾಕರ್ ಅವರು ಬಿಸಿಎಂ ಹಾಗೂ ಗಾಂಧಿನಗರದ ಎಸ್ಸಿ ಎಸ್ಟಿಹಾಸ್ಟೆಲ್ ಗಳಿಗೆ ದಿಢೀರ್ ಭೇಟಿ ನೀಡಿದರು. ಈ ಸಮಯದಲ್ಲಿಇಬ್ಬರು ವಾರ್ಡನ್ ಗಳೂ ವಿದ್ಯಾರ್ಥಿನಿಲಯದಲ್ಲಿ ಇರದೆ ಕರ್ತವ್ಯ ಲೋಪವೆಸಗಿದ್ದು, ಕಂಡು ಬಂದಿದ್ದು, ಸಿಇಓ ಅರ್ಧ ಗಂಟೆ ಕಾದರೂ ಕೂಡ ಅವರು ಬರಲಿಲ್ಲ, ಇದರ ಜೊತೆಗೆ ಸ್ಟಾಕ್ ಬುಕ್ ಕೂಡ ತೋರಿಸಲಿಲ್ಲ, ಇವರಿಬ್ಬರ ಬೇಜವಾಬ್ದಾರಿನಕ್ಕೆ ಇವರಿಬ್ಬರ ಮೇಲೆಶಿಸ್ತು ಕ್ರಮ ಜರುಗಿಸಲು ಶಿಫಾರಸ್ಸು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಇದಕ್ಕೂ ಮೊದಲು ಎರಡೂ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಾಸ್ಟೆಲ್ ವ್ಯವಸ್ಥೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.