ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಗುಡೂರ (ಭೋವಿ) ಗ್ರಾಮದಲ್ಲಿ ಯುವಕನೊಬ್ಬ ಪ್ರೀತಿಸಲು ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿ, ತಾನೂ ಕೂಡ ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದ್ದು, ಸಂತ್ರಸ್ತ ಯುವತಿಗೆ ಚಿತ್ರದುರ್ಗ ಭೋವಿ ಗುರುಪೀಠದ ಸ್ವಾಮೀಜಿಗಳಾದ ಶ್ರೀ ಇಮ್ಮಡಿಸಿದ್ದೇಶ್ವರ ಸ್ವಾಮೀಜಿ ಸಾಂತ್ವಾನ ಹೇಳಿದರು.
ಅಫ್ಜಲ್ ಸೋಲಾಪೂರ (27) ಎಂಬಾತ ಯುವತಿ ನೇತ್ರಾವತಿ ವಡ್ಡರ (21) ಅವರಿಗೆ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ನಿರಾಕರಿಸಿದ ನಂತರ ಆಕೆ ತನಗೆ ಸಿಗುವುದಿಲ್ಲ ಎಂದು ಯುವತಿ ಕೆಲಸಕ್ಕೆ ತೆರಳುತ್ತಿದ್ದಾಗ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನೊಂದ ಯುವತಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲಿಗೆ ತರಳಿದ ಭೋವಿ ಗುರುಪೀಠದ ಇಮ್ಮಡಿಸಿದ್ದರಾಮೇಶ್ವರ ಶ್ರೀಗಳು ನೊಂದ ಯುವತಿ ಯನ್ನು ಹಾಗೂ ಅವರ ಕುಟುಂಬ ವರ್ಗವನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಮೂಲಕ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ವೆಂಕಟೇಶ ಮೇಸ್ತ್ರಿ, ತುಳಸಪ್ಪ ಪೂಜಾರ, ಶಿವಾನಂದ ಕನ್ನೂರು, ರವಿ ಪೂಜಾರ, ಮಹಾಂತೇಶ ಕೃಷ್ಣಾಪುರೆ, ಸಿದ್ದಪ್ಪ ಒಡೆಯರ್, ಮಂಜುನಾಥ ಭೋವಿ, ವೆಂಕಟೇಶ ಬಂಡಿವಡ್ಡರ್, ಹನುಮಂತಪ್ಪ ಮ್ಯಾಗೇರಿ ಹಾಗೂ ಇನ್ನೂ ಮುಂತಾದವರು ಇದ್ದರು.