ನವದೆಹಲಿ: ಸಂಪುಟ ವಿಸ್ತರಣೆಯೋ ಅಥವ ಪುನಾರಚನೆಯೋ ಎಂದು ಹೋಗಿದ್ದ ಸಿಎಂ ಯಡಿಯೂರಪ್ಪ ಅವರಿಗೆ ಕಾದಿದ್ದು ನಾಯಕತ್ವ ಬದಲಾವಣೆ ವಿಚಾರ ಇದು ಕೇಂದ್ರದ ನಾಯಕರು ಯಡಿಯೂರಪ್ಪ ಅವರಿಗೆ ಕೊಟ್ಟ ಬಿಗ್ ಶಾಕ್..
ದೆಹಲಿಗೆ ಸಿಎಂ ಯಡಿಯೂರಪ್ಪ ಅವರನ್ನು ಕರೆಸಿಕೊಂಡಿದ್ದ ಅಮಿತ್ ಶಾ ನೇರವಾಗಿ ಯಡಿಯೂರಪ್ಪಗೆ ನಾಯಕತ್ವ ಬದಲಾವಣೆ ಬಗ್ಗೆ ಪ್ರಸ್ತಾಪಮಾಡಿದ್ದಾರೆ. ಇದು ಯಡಿಯೂರಪ್ಪ ಅವರಿಗೆ ಬಿಗ್ ಶಾಕ್ ಆಗಿದೆ. ಸಿಎಂ ಸ್ಥಾನ ಹಾಗೂ ನಾಯಕತ್ವ ಬದಲಾವಣೆಗೆ ಒಪ್ಪಿದರೆ ಬಿವೈ ವಿಜಯೇಂದ್ರ ಗೆ ಕೇಂದ್ರ ಸಚಿವ ಸ್ಥಾನವನ್ನು ನೀಡಲಾಗುತ್ತದೆ. ನಿಮಗೆ ರಾಜ್ಯಪಾಲರ ಹುದ್ದೆಯನ್ನು ನೀಡಲಾಗುತ್ತದೆ ಎಂದಿದ್ದಾರೆ. ಮುಂದಿನ ವಾರದಲ್ಲಿ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ ಇದರ ಸುಳಿವೇ ಇಲ್ಲದೆ ಹೋಗಿದ್ದ ಯಡಿಯೂರಪ್ಪ ಅವರಿಗೆ ಶಾಕ್ ಆಗಿದ್ದು ಇದಕ್ಕೆ ಯಾವುದೇ ರೀತಿ ಪ್ರತಿಕ್ರಿಯಿಸದೆ ಅಲ್ಲಿಂದ ನೇರವಾಗಿ ಕರ್ನಾಟಕ ಭವನದಲ್ಲಿದ್ದ ಬಿವೈ ವಿಜಯೇಂದ್ರ ಬಳಿಗೆ ಬಂದು ಸುಮಾರು ನಾಲ್ಕು ಗಂಟೆಗಳ ಕಾಲ ಚರ್ಚೆ ಮಾಡಿದ್ದಾರೆ. ನಂತರ 7.55 ರ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಸಮಯ ತೆಗೆದುಕೊಂಡು ನಿರ್ಧಾರ ತಿಳಿಸುವಂತೆ ಹೇಳಿರುವ ಅಮಿತ್ ಶಾ ಗೆ ಯಾವ ಉತ್ತರ ಯಡಿಯೂರಪ್ಪ ನೀಡುತ್ತಾರಾ ಎಂದು ಕಾದು ನೋಡಬೇಕು. ಸಂಯುಕ್ತವಾಣಿ