ಸಂಸದರು ಹಾಗು ಕೇಂದ್ರ ಸಚಿವರು ಆಗಿರುವ ಎ.ನಾರಾಯಣಸ್ವಾಮಿ ಅವರೇ ನಿಮಗೆ ಮೋದಿ ಎದುರಿಗೆ ಮಾತಾಡಲು ಧೈರ್ಯವಿಲ್ಲವಾ? ಮಾತಾಡಿ ಹಣ ಬಿಡುಗಡೆ ಮಾಡಿಸಿ ಇಲ್ಲವೇ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ರಾಜ್ಯ ರೈತ ಸಂಘದ ಹೆಚ್ ಆರ್ ಬಸವರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಅವರು ಜಿಲ್ಲಾ ಪಂಚಾಯಿತಿ ಕಚೇರಿ ಮುಂದಿನ ಪ್ರತಿಭಟನೆಯಲ್ಲಿ ಮಾತಾಡಿದರು. ಯಾಕೆ ನೀವು ಅಧಿಕಾರಕ್ಕೆ ಅಂಟಿಕೊಂಡಿದ್ದೀರಾ? ಹಣ ಬಿಡುಗಡೆ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಅವರು ನಾವು ಕೇಂದ್ರದ ಜೊತೆಗೆ ಮಾತಾಡಿದ್ದೇವೆ. ಅವರು ಹಣ ಬಿಡುಗಡೆ ಮಾತಾಡಿದ ಮೇಲೆ ನಮ್ಮ ಪಾಲಿನ ಹಣ ಬಿಡುಗಡೆ ಮಾಡುತ್ತೇವೆ ಎನ್ನುತ್ತಾರೆ. ಹಣ ಬಿಡುಗಡೆ ಮಾಡದೆ ನಾವೇಗೆ ಕೆಲಸ ಆರಂಭಿಸುವುದು ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ ರಾಜಕೀಯ ಪಕ್ಷಗಳು ನೀವು ಎಷ್ಟು ವರ್ಷ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ರಾಜಕಾರಣ ಮಾಡುತ್ತೀರಾ? ಭದ್ರಾ ಸಮಸ್ಯೆ ಹಗೆ ಹರಿಸಿದರೆ ಜನ ನಮ್ಮನ್ನು ಮರೆತು ಬಿಡುತ್ತಾರೆಂದು ಸಮಸ್ಯೆಯನ್ನು ಜೀವಂತವಾಗಿಟ್ಟಿದ್ದಿರಾ? ಹಣ ಬಿಡುಗಡೆ ಮಾಡಿದ್ದೆವೆಂದು ವಿಜಯೋತ್ಸವ ಮಾಡಿ ಚುನಾವಣೆ ಗೆದ್ದೀದ್ದಿರಾ ಈಗಲು ಹಣ ಬಿಡುಗಡೆ ಮಾಡಿದರೆ ಚುನಾವಣೆಯಲ್ಲಿ ನಾವು ಮತ ಹಾಕುತ್ತಿದ್ದೆವು. ಯಾರು ರೈತಪರವಾಗಿದ್ದಾರೋ ಅವರಿಗೆ ಮತ ಹಾಕುತ್ತೇವೆ ಜಯಕಾರ ಹಾಕುತ್ತೇವೆ ಎಂದು ಹೇಳಿದರು.