ಅಂಗಡಿಗಳ ಮೇಲಿನ ನಾಮಫಲಕಗಳ ಮೇಲೆ ಶೆ 60 ರಷ್ಟು ಕನ್ನಡವಿರಬೇಕು ಎಂದು ಸರ್ಕಾರದ ಆದೇಶವಿದ್ದರೂ ಪಾಲಿಸದೆ ಇರುವ ಅಂಗಡಿಗಳ ನಾಮಫಲಕಗಳಿಗೆ ಮಸಿ ಬಳಿದು ಪ್ರತಿಭಟನೆ ಮಾಡುತ್ತಿದ್ದ ಕರುನಾಡು ವಿಜಯಸೇನೆಯ 25 ಜನ ಕಾರ್ಯಕರ್ತರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆಸಿದ್ದಾರೆ.
ನಾಮಫಲಕಗಳಿಗೆ ಕನ್ನಡವಿರಬೇಕೆಂದು ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಿಡಿದು ಕರುನಾಡ ವಿಜಯಸೇನೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಾ ನಗರದ ಖಾಸಗಿ ಶೋರೂಂ ಬಳಿಬಂದಾಗ ಪೊಲೀಸರು ಬಂದು ಎಳೆದಾಡುವಾಗ ಸಂಗೊಳ್ಳಿ ರಾಯಣ್ಣ ಪ್ರತಿಮೆ ಕೈ ಮುರಿದ್ದಾರೆ. ಮಹಿಳಾ ಪೊಲೀರಿಲ್ಲದೆ ಸಂಘದ ಮಹಿಳಾ ಕಾರ್ಯಕರ್ತರನ್ನು ಎಳೆದಾಡಿದ್ದಾರೆ. ಸರ್ಕಾರಿ ನಿಯಮ ಪಾಲಿಸಿ ಎಂದು ಹೇಳಲು ಹೊರಟ ನಮ್ಮನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿದ್ದು,ಮುಂದಿನ ದಿನಗಳಲ್ಲಿ ಪೊಲೀಸ್ ದೌರ್ಜನ್ಯದ ವಿರುದ್ದ ಹೋರಾಟ ಮಾಡುತ್ತೇವೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ ಟಿ ಶಿವಕುಮಾರ್ ಹೇಳಿದರು.