ಸಿಲಿಂಡರ್ ಸ್ಪೋಟಕ್ಕೆ ಬೆಚ್ಚಿ ಬಿದ್ದ ಗೊಲ್ಲರ ಹಟ್ಟಿ

ಜಿಲ್ಲಾ ಸುದ್ದಿ

ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂರು ಮನೆ ಹಾಗೂ ಮನೆಲಿದ್ದ ಅಂಗಡಿ ಸುಟ್ಟಿರುವ ಘಟನೆ ಯಲಗಟ್ಟ ಗೊಲ್ಲರಹಟ್ಟಿಯಲ್ಲಿ ನಡೆದಿದೆ.

 

 

 

ಚಳ್ಳಕೆರೆ ತಾಲೂಕಿನ ವಾಸದ ಮನೆಗೆ ಗ್ಯಾಸ್ ಸಿಲಿಂಡರ್ ಸ್ಫೋಟ ಗೊಂಡು ಬೆಂಕಿ ಹತ್ತಿಕೊಂಡು ಮನೇಲಿದ್ದ ದವಸ ಧಾನ್ಯಗಳು ಬಟ್ಟೆ ಬರೆಗಳು ಹಾಗೂ ಅಂಗಡಿಯ ವಸ್ತುಗಳು ಸುಟ್ಟಿವೆ. ಇದರಿಂದ ಸುಮಾರು 3 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ನಷ್ಟವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಬೆಳಿಗ್ಗೆ ಈ ಘಟನೆ ನಡೆದಿದ್ದು ಯಲಗಟ್ಟೆ ಗೊಲ್ಲರಹಟ್ಟಿಯ ಈರಣ್ಣ ಚಂದ್ರಣ್ಣ ಹಾಗೂ ಈರಣ್ಣ ಎಂಬುವರ ಮನೆಗಳಿಗೆ ಹಾನಿಯಾಗಿದೆ . ಸಿಲಿಂಡರ್ ಸ್ಫೋಟಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ ಮನೆಯಲ್ಲಿ ಇದ್ದ ದವಸ ಧಾನ್ಯ ಬಟ್ಟೆ ಇತರೆ ವಸ್ತುಗಳು ಸುಟ್ಟಿವೆ ಬೆಂಕಿ ಕಾಣಿಸಿಕೊಡ ತಕ್ಷಣವೇ ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿದ್ದು ಅಗ್ನಿಶಾಮಕ ತಂಡ ಗ್ರಾಮಕ್ಕೆ ಬರುವ ಸಮಯಕ್ಕೆ ಮನೆಯ ಮೇಲ್ಚಾವಣಿ ಸುಟ್ಟಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿವೆ. ಈ ಅಗ್ನಿ ಅನಾಹುತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ಘಟನಾ ವಿಷಯ ತಿಳಿಯುತ್ತಿದ್ದಂತೆ ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿಟಿ ಶಶಿಧರ್ ಸ್ಥಳಕ್ಕೆ ಭೇಟಿ ನೀಡಿ ಅಗ್ನಿ ಅನಾಹುತದಲ್ಲಿ ಮನೆ ಕಳೆದುಕೊಂಡವರಿಗೆ ವೈಯಕ್ತಿಕ ಧನ ಸಹಾಯ ಮಾಡಿದ್ದಾರೆ. ಹಾಗೂ ಸ್ಟುಡಿಯೋ ಮಾಲೀಕ ಭಾನು ಅವರು ಸಹ ವೈಯಕ್ತಿಕ ಧನ ಸಹಾಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾ ಸಿಬ್ಬಂದಿ ಪರಶುರಾಮ ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿಟಿ ಶಶಿಧರ್ ಭಾನು ವೀರೇಶ್ ಕಾಂಗ್ರೆಸ್ ಮುಖಂಡ ವೀರೇಶ್ ವೆಂಕಟೇಶ್ ಸಿರಿಯಣ್ಣ ವೀರಣ್ಣ ಸೇರಿದಂತೆ ಗ್ರಾಮಸ್ಥರು ಮುಖಂಡರು ಇದ್ದರು.

Leave a Reply

Your email address will not be published. Required fields are marked *