ಚಿತ್ರದುರ್ಗ: ಡೆಡ್ಲಿ ಡೆಲ್ಟ್ ವೈರಸ್ ಕರ್ನಾಟಕಕ್ಕೂ ಕಾಲಿಟ್ಟಿದ್ದು ರಾಜ್ಯದಲ್ಲಿ ಅತಂಕ ಮನೆ ಮಾಡಿದೆ.
ಮೈಸೂರು ಹಾಗು ಬೆಂಗಳೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿದೆ. ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮೈಸೂರಿನಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿರುವುದನ್ನು ಖಚಿತ ಪಡಿಸಿದ್ದಾರೆ.ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಪಂಜಾಬ್ ರಾಜ್ಯಗಳಲ್ಲಿ ಕಂಡ ಬಂದಿದೆ. ಎರಡೂ ಡೋಜ್ ವ್ಯಾಕ್ಸಿನ್ ಪಡೆದವರಿಗೂ ಇದು ಬರುವ ಚಾನ್ಸ್ ಇದ್ದು ಆತಂಕ ಎದುರಾಗಿದೆ. ದೇಶದಲ್ಲಿ 25 ಪ್ರಕರಣಗಳು ಕಂಡು ಬಂದಿದ್ದು, ಈಗಾಗಲೇ ತಜ್ಞರ ಸಲಹೆ ಮೇರೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಎಲ್ಲಾ ಜಿಲ್ಲೆಗಳಲ್ಲೂ ವೈದ್ಯರ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ಶ್ರೀರಾಮುಲು ಹೇಳಿದರು
ಸಂಯುಕ್ತವಾಣಿ
ಸುದ್ದಿಮತ್ತುಜಾಹೀರಾತಿಗಾಗಿ ಸಂಪರ್ಕಿಸಿ
8660924503