ಪ್ರಧಾನಿ ಸೇರಿದಂತೆ ಪಾರ್ಲಿಮೆಂಟರಿ ಬೋರ್ಡ್ ಕಮಿಟಿ ಇದೆ ಅದು ಯಾರಿಗೆ ಟಿಕೆಟ್ ಕೊಡಬೇಕೆಂದು ತೀರ್ಮಾನ ಮಾಡುತ್ತದೆ.ಈಗಾಗಲೇ 195 ಸ್ಥಾನಗಳ ಅಭ್ಯರ್ಥಿಗಳ ಘೋಷಣೆ ಮಾಡಿದೆ.ಉಳಿದ ಎಲ್ಲಾ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯು 24 ರಿಂದ 48 ಗಂಟೆಗಳಲ್ಲಿ ಘೋಷಿಸುತ್ತಾರೆಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ಟಿಕೆಟ್ ಹಾಗೂ ಅಭ್ಯರ್ಥಿ ಘೋಷಣೆಯನ್ನು ಪ್ರತೀ ಆಕಾಂಕ್ಷಿ, ಸಚಿವರು ಹಾಗೂ ಸಂಸದರು ಕಾರ್ಯಕರ್ತರು ಕೂಡ ಕಾಯುತ್ತಿದ್ದಾರೆ. ಘೋಷಣೆಯ ನಂತರ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದರು. ಬಿಜೆಪಿ ಟಿಕೆಟ್ ಸಿಗದ ಕೆಲವರು ಕಾಂಗ್ರೆಸ್ ಗೆ ಹೋಗುತ್ತಾರೆ ನೀವು ಹೋಗುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಕೆರಳಿದ ಕೇಂದ್ರ ಸಚಿವ ನಾರಾಯಣಸ್ವಾಮಿ,ಬಿಜೆಪಿ ಕಟ್ಟುವ ಕೆಲಸದ ತಳಹದಿಯಲ್ಲಿ ನಾರಾಯಣಸ್ವಾಮಿ ಬೆವರಿನ ಹನಿ ಇದೆ.
ನಾರಾಯಣಸ್ವಾಮಿಗೆ ಅಡ್ಜೆಸ್ಟ್ ಮೆಂಟ್ ರಾಜಕಾರಣ, ಪಕ್ಷಾಂತರದ ಬಗ್ಗೆ ಜಿಲ್ಲೆ ರಾಜ್ಯ ಹಾಗೂ ದೇಶದ ಯಾವುದೇ ಮಾಧ್ಯಮಗಳು ಕೇಳಬಾರದು ಎಂದು ಕೆರಳಿದರು.