ಕಾರಿನ ಚಾಲಕ ನಿದ್ದೆ ಮಂಪರಿನಲ್ಲಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ಮಕ್ಕಳು ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಾಣಿಕರೆ ಬಳಿ ನಡೆದಿದೆ.
ಚಿತ್ರದುರ್ಗದ ಚಳ್ಳಕೆರೆಯ ಸಾಣಿಕೆರೆ ಸೇತುವೆ ಬಳಿ ಕಾರು ಚಾಲಕನ ನಿಯಂತ್ರ ಕಳೆದುಕೊಂಡಿದೆ. ಇದರಿಂದ ಮೂರು ಕಂದಮ್ಮಗಳು ಓರ್ವ ಯುವಕ ಸೇರಿದಂತೆ ಮೃತಪಟ್ಟಿದ್ದು, ಅವರನ್ನು ರಾಯಚೂರಿನ ದುಂಡಮ್ಮನ ಹಳ್ಳಿಯ ಲಿಂಗಪ್ಪ,(25),ಸಿಂಧುಶ್ರೀ (02), ಅಯ್ಯಾಳಪ್ಪ (05) ತಿಂಗಳು, ರಕ್ಷಾ(03) ತಿಂಗಳು ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಚಾಲಕ ನಾಗಪ್ಪ(35),ಯಲ್ಲಮ್ಮ, ಯಮುನಾ ಮತ್ತು ಮಲ್ಲಮ್ಮ ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಚಳ್ಳಕೆರೆ ಠಾಣೆಯಲ್ಲಿ ದಾಖಲಾಗಿದೆ.