Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025

    Play Rummy 500 Online Uk

    November 19, 2025
  • ರಾಜ್ಯ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025

    ಪ್ರತಿಭೆಯಿದ್ದರೆ ಏನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ

    November 16, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ಜಿಲ್ಲಾ ಸುದ್ದಿ»ಮಾನವ ಅಂತರಂಗದಿಂದಲೂ ಶುದ್ಧಿಯಾಗಿರಬೇಕು
ಜಿಲ್ಲಾ ಸುದ್ದಿ

ಮಾನವ ಅಂತರಂಗದಿಂದಲೂ ಶುದ್ಧಿಯಾಗಿರಬೇಕು

D KumaraswamyBy D KumaraswamyFebruary 16, 2023No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಮಾನವ ಬರಿ ಬಾಹ್ಯದಿಂದ ಮಾತ್ರ ಶುದ್ದಿಯಾಗಿರದೇ ಸಾಲದು ಅಂತರಂಗದಿಂದಲೂ ಶುದ್ದಿಯಾಗಿರಬೇಕಿದೆ. ಇದರಿಂದ ಉತ್ತಮವಾದ ಸಂಸ್ಕಾರವನ್ನು ಪಡೆಯುವ ಅಗತ್ಯ ಇದೆ ಎಂದು ಸಾಣೆಹಳ್ಳಿಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ನಗರದ ಶ್ರೀ ಕಬೀರಾನಂದಾಶ್ರಮದವತಿಯಿಂದ ನಡೆಯುವ ಶಿವನಾಮ ಸಪ್ತಾಹದ ಅಂಗವಾಗಿ 93ನೇ ಮಹಾ ಶಿವರಾತ್ರಿ ಮಹೋತ್ಸವ 2023ರ ಮೂರನೇ ದಿನದ ಸಾನಿದ್ಯವನ್ನು ವಹಿಸಿ ಮಾತನಾಡಿ, ಮಾನವ ಶಾಂತಿ,ಸಹನೆ, ತಾಳ್ಮೆಯಿಂದ ಬದುಕನ್ನು ನಡೆಸಬೇಕಿದೆ. ಮಾನವನಿಗೆ ಸಂಸ್ಕಾರವನ್ನು ನೀಡಿದರೆ ಅವನು ಮಹಾದೇವನಾಗುತ್ತಾನೆ. ನಿಮ್ಮ ಸ್ವಭಾವಗಳು ಪರಿವರ್ತನೆಯಾದಾಗ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಿದೆ. ಭಗವಂತ ಬಾಹ್ಯ ಮೂರ್ತಿಗಳಲ್ಲಿ ಇಲ್ಲ ಆತನು ನಮ್ಮ ಅಂತರಂಗದಲ್ಲಿಯೇ ಇದ್ದಾನೆ. ಭಗವಂತ ಜಡವಾದ ವಸ್ತುವಲ್ಲ ಆತನಿಗ ಚೈತನ್ಯಯಿದೆ ಅರಿವುಯಿದೆ ಆನಂದಯಿದೆ ಆದರೆ ನೀವು ನೋಡುವ ಯಾವುದೇ ದೇವರಿಗೆ ಅರಿವು ಇಲ್ಲ, ಚೈತನ್ಯ ಇಲ್ಲ ಆನಂದ ಇಲ್ಲವಾಗಿದೆ. ದೇವರನ್ನು ಸಹಾ ರಿಚಾರ್ಜ ಮಾಡುವ ಅಗತ್ಯ ಇದೆ, ಮಾನವ ಮಹಾದೇವ ಬೇರೆ ಅಲ್ಲವೇ ಅಲ್ಲ ಮನವ ಸಹಾ ಶ್ರೇಷ್ಠವಾದವರು ಯಾವಾಗ ಎಂದರೆ ನಿಮ್ಮ ಸ್ವಬಾವ ಪರಿವರ್ತನೆ ಮಾಡುತ್ತಾ ಹೊಂದಾಗ ಮಾತ್ರ ಎಂದರು.
ಮಾನವನಿಗೆ ವಿಘ್ನಗಳು ಬರುತ್ತವೆ ಇದರಿಂದ ತಾಳ್ಮೆಯನ್ನು ಕಳೆದು ಕೊಳ್ಳಬಾರದು. ಜೀವನದಲ್ಲಿ ಒಳ್ಳೆಯರ ಬಡನಾಟವನ್ನು ಇಟ್ಟುಕೊಂಡಿರಬೇಕಿದೆ. ಇದರಿಂದ ಉತ್ತಮವಾದ ಬದುಕನ್ನು ನಡೆಸಲು ಸಾಧ್ಯವಿದೆ. ಶಿವರಾತ್ರಿ ಎಂದರೆ ಒಂದು ದಿನ ಮಾತ್ರ ಶಿವನಾಮ ಸ್ಮರಣೆಯನ್ನು ಮಾಡುವುದಲ್ಲ ಪ್ರತಿ ದಿನವೂ ಸಹಾ ಶಿವನಾಮ ಸ್ಮರಣೆಯನ್ನು ಮಾಡಬೇಕಿದೆ. ಉಸಿರಾಟದಲ್ಲೂ ಸಹಾ ಶಿವ ಸ್ಮರಣೆ ಇರಬೇಕಿದೆ. ಶಿವಲಿಂಗಾನಂದ ಶ್ರೀಗಳು ಸಂಸ್ಕಾರವನ್ನು ನೀಡುತ್ತಾ ಬಂದಿದ್ದಾರೆ ಈ ಸಂಸ್ಕಾರವನ್ನು ಉಪಯೋಗ ಮಾಡಿಕೊಂಡರೆ ಉತ್ತಮವಾದ ಜೀವನವನ್ನು ಸಾಗಿಸಲು ಸಾಧ್ಯವಿದೆ ಎಂದು ಪಂಡಿತಾರಾಧ್ಯ ಶ್ರೀಗಳು ತಿಳಿಸಿದರು.
ಸೊಲ್ಲಾಪುರದ ಶ್ರೀ ರಾಮಚಂದ್ರಣ್ಣ ಮೇತ್ರೇ ತಮ್ಮ ಆರ್ಶೀವಚನದಲ್ಲಿ ಮಾನವನಿಗೆ ಭಗವಂತ ಹೃದಯವನ್ನು ನೀಡಿದ್ಧಾನೆ. ಇದರಿಂದ ಪ್ರೀತಿ, ಪ್ರೇಮದಿಂದ ಇರಲು ಸಾಧ್ಯವಿದೆ. ಪ್ರೇಮದಿಂದ ಪರಮಾತ್ಮ ಪ್ರಾಪ್ತಿಯಾಗಲು ಸಾಧ್ಯವಿದೆ. ಯಾವುದೇ ಸುಖ ಸಂತೋಷಗಳಿಗೆ ಭಗವಂತ ಒಲಿಯುವುದಿಲ್ಲ ಇದರ ಬದಲಿಗೆ ಸಾಮಾನ್ಯ ವ್ಯಕ್ತಿಯ ಭಕ್ತಿಗೆ ಒಲಿಯುತ್ತಾನೆ, ಜೀವನಕ್ಕೆ ಗುರುವಿನ ಅಗತ್ಯ ಇದೆ. ಪರಮಾತ್ಮನ ದರ್ಶನ ಪ್ರೇಮದಿಂದ ಮಾತ್ರ ಪಡೆಯಲು ಸಾಧ್ಯವಿದೆ. ತತ್ವಜ್ಞಾನಿ ಗುರುವಿನ ಸಂಸ್ಕಾರದ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಜೀವನ ವ್ಯರ್ಥವಾಗುತ್ತದೆ. ಮಾನವ ಜೀವನದಲ್ಲಿ ಗುರುವಿಗೆ ಪ್ರಮುಖವಾದ ಸ್ಥಾನವನ್ನು ನೀಡಬೇಕಿದೆ. ಸತ್ ಪುರುಷರ ಸಂಘದಿಂದ ಜೀವನ ಸಂತೋಷವಾಗಿರಲು ಸಾಧ್ಯವಿದೆ ಎಂದರು.
ಸೊಲ್ಲಾಪುರದ ಶ್ರೀ ಗುರುನಾಥ್ ಮಹಾರಾಜ್ ಮಾತನಾಡಿ, ಶಿವರಾತ್ರಿ ಮತ್ತು ನವರಾತ್ರಿಗಳು ಮಾನವನಿಗೆ ಪವಿತ್ರವಾದ ರಾತ್ರಿಗಳಾಗಿವೆ. ನರ ಜನ್ಮ ಶ್ರೇಷ್ಠವಾಗಿz. ಬದುಕಿನಲ್ಲಿ ಮಾರ್ಗದರ್ಶಕರಾಗಿ ಗುರುಗಳ ಅಗತ್ಯ ಇದೆ. ಗುರುವಿಲ್ಲದ ಜೀವನ ವ್ಯರ್ಥವಾಗುತ್ತದೆ. ಮಾನವ ಬದುಕಿಗೆ ಮುಕ್ತಿಯ್ನನು ಕರುಣಿಸುವುದು ಗುರುವಿನ ಕೆಲಸವಾಗಿದೆ. ಪಶು ಪಕ್ಷಗಳಿಗೆ ಮಾನವನ ಬದಕು ಇಲ್ಲವಾಗಿದೆ ಅದೇ ರೀತ ದೇವತೆಗಳಿಗೂ ಸಹಾ ಮಾನವನ ಬದುಕು ಇಲ್ಲವಾಗಿದೆ ನಮಗೆ ಸಿಕ್ಕಿರುವ ಮಾನವ ಬದುಕನ್ನು ಉತ್ತಮ ಪಡಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚಳ್ಳಕೆರೆಯ ಶ್ರೀಸದ್ಗುರು ನರಹರಿ ಪೀಠದ ಸದ್ಗುರು ಶ್ರೀ ರಾಜಾರಾಮ ಶ್ರೀಗಳು ಸೊಲ್ಲಾಪುರದ ಶ್ರೀ ರಾಮಚಂದ್ರಣ್ಣ ಮೇತ್ರೇ, ಸಂಗದರಿಯ ಶ್ರೀ ಗುರುನಾಥ್ ಮಹಾರಾಜ್ ಬಾಗಲಕೋಟೆಯ ಶ್ರೀ ಕೌದಿಶ್ವರ ಮಹಾಸಂಸ್ಥಾನದ ಶ್ರೀ ಮಾಧವಾನಂದ ಶ್ರೀಗಳು ಸಾನಿಧ್ಯವಹಿಸಿದ್ದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಭೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದರಾದ ಜನಾರ್ಧನ ಸ್ವಾಮಿ, ನಗರಸಭಾ ಸದಸ್ಯರಾದ ಶಶಿಧರ್, ನಾಮ ನಿರ್ದೇಶನ ಸದಸ್ಯರಾದ ನಾಗರಾಜ್, ರಮೇಶ್ ಆಚಾರ್, ಕೃಷ್ಣಮೂರ್ತಿ, ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್, ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ 93ನೇ ಶಿವನಾಮ ಸಪ್ತಾಹದ ಸಮಿತಿಯ ಅಧ್ಯಕ್ಷರಾಧ ಅನಿತ್ ಕುಮಾರ್, ಸಿದ್ದೇಶ್ ಯಾದವ್, ಶ್ರೀಮತಿ ಆಶಾ ರಘುಆಚಾರ್ ಭಾಗವಹಿಸಿದ್ದರು.
ಜೀಕನ್ನಡ ವಾಹಿನಿಯ ಸರಿಗಮಪದ ಜಿ.ಮೆಹಬೂಬ್, ಕುಮಾರಿ ದಿವ್ಯ ರಾಮಚಂದ್ರರವರಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಜೈ ವಾಸವಿ ಮಿತ್ರ ವೃಂದದಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸುಬ್ರಾಯಭಟ್ ವೇದ ಘೋಷವನ್ನು ಮಾಡಿದರೆ, ಪ್ರಜ್ವಲ್ ಪ್ರಾರ್ಥಿಸಿದರೆ, ಪ್ರಶಾಂತ್ ಸ್ವಾಗತಿಸಿದರು. ನಿವೃತ ಮುಖ್ಯ ಉಪಾಧ್ಯರಾದ ಹುರಳಿ ಬಸವರಾಜ್ ಹಾಗೂ ಮುರುಗೇಶ್ ಕಾರ್ಯಕ್ರಮ ನಿರೂಪಿಸಿದರು.

 

 

Share. Facebook Twitter Pinterest LinkedIn Tumblr WhatsApp Email
Previous Articleಮಾದಿಗ ಸಮುದಾಯದ (ಎಡಗೈ ) ಕಾಂಗ್ರೆಸ್ ಪಕ್ಷದ ನಿಷ್ಠಾವಂತರಿಗೆ ಮಾತ್ರ ಟಿಕೆಟ್ ನೀಡಿ
Next Article ಚುನಾವಣಾ ಕರ್ತವ್ಯ ಜವಾಬ್ದಾರಿಯುತವಾಗಿ ನಿರ್ವಹಿಸಿ:  ಜಿ ಪಂ ಸಿಇಒ ಎಂ.ಎಸ್.ದಿವಾಕರ್
D Kumaraswamy
  • Tumblr

Related Posts

ಆಹಾರ ದಾನ ಸಮಾಜ ಸೇವೆ ಸಂಕೇತ:ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

June 25, 2025

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಗೆ ಅತ್ಯುತ್ತಮ ಫಲಿತಾಂಶ : ಅಭಿನಂದಿಸಿದ ಆಡಳಿತ ವರ್ಗ

May 14, 2025

ಮಲ್ಟಿ ಕ್ಯೂಸಿನ್ ಕುಕ್ ಅಭ್ಯರ್ಥಿಗಳಿಂದ ಮರು ಅರ್ಜಿ ಆಹ್ವಾನ

March 20, 2025

ಸಕಾಲ ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

March 20, 2025
Leave A Reply Cancel Reply

Recent Posts
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
  • Skrill Casino 5 Pounds
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.