ಚಿತ್ರದುರ್ಗ: ಸರ್ಕಾರ ರೈತರ ಜೊತೆ ಕಾಟಾಚಾರದ ಚರ್ಚೆ ಮಾಡಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕಟೀಲ್,ಕೇಂದ್ರ ಸರ್ಕಾರ ಹನ್ನೊಂದು ಬಾರಿ ರೈತರೊಂದಿಗೆ ಸಭೆ ಮಾಡಿ ಚರ್ಚಿಸಿದೆ. ವಿಶ್ವಾಸ ಗಳಿಸಲು ಸತತ ಪ್ರಯತ್ನ ಮಾಡಿದೆ.ರಾಜಕೀಯ ಲಾಭ ಪಡೆಯಲು ಘಾತುಕ ಶಕ್ತಿಗಳು ಹೋರಾಟದ ಹಿಂದಿವೆ ಎಂದು ಆರೋಪಿಸಿದರು.
.ಸಿದ್ದರಾಮಯ್ಯಗೆ ರೈತರ ಪರ ಮಾತನಾಡಲು ನೈತಿಕ ಹಕ್ಕಿಲ್ಲ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಬೆಳಗಾವಿ ವಿಧಾನ ಸೌಧ ಅಧಿವೇಶನದ ಸಮಯದಲ್ಲಿ ರೈತನ ಆತ್ಮಹತ್ಯೆ ಆಯ್ತು. ಅನ್ನದಾತನ ಮನೆಗೆ ಹೋಗಿ ಕಣ್ಣೀರು ಹೊರೆಸುವ ಕೆಲಸ ಮಾಡಲಿಲ್ಲ.ಸಮಾಜವಾದದ ಹೆಸರಿನಲ್ಲಿ ಮಜಾ ಮಾಡಿದ ಸಿಎಂ, ಅವರಿಗೆ ಏನು ಹಕ್ಕಿದೆ.ಕೇಂದ್ರ ರಾಜ್ಯ ಸರ್ಕಾರ ಅಂತ್ಯಕಾಲ ಹತ್ತಿರ ಬರುತ್ತಿದೆ ಎಂದು ಡಿಕೆಶಿ ಹೇಳಿಕೆಗೆ ಕಟೀಲ್ ತಿರುಗೇಟು ನೀಡುತ್ತಾ, ಡಿಕೆಶಿವಕುಮಾರ್ ಅವರು, ರಾಜಕೀಯ ಅಂತ್ಯ ಕಾಣುತ್ತಾರೆ. ಮೊನ್ನೆ ಎಲ್ಲಿಂದ ಬಂದರೂ (ಜೈಲಿನಿಂದ)ಮೆರವಣಿಗೆ ಮಾಡಿದ್ರೂ, ಮತ್ತೆ ಅಲ್ಲಿಗೆ (ಜೈಲಿಗೆ) ಹೋಗುತ್ತಾರೆ ಎಂದು ಭವಿಷ್ಯ ನುಡಿದರು.
ಸಂಯುಕ್ತವಾಣಿ