Chitradurga 7 people arrest

ಗ್ರಾಮಕ್ಕೆ ಬಂದು ಸಣ್ಣ ವಿಚಾರಕ್ಕೆ ಗುಂಡು ಹಾರಿಸಿದ 7 ಜನರ ಬಂಧನ

ಕ್ರೈಂ ಜಿಲ್ಲಾ ಸುದ್ದಿ

ಮೈಸೂರುನ,09- ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ  ಗ್ರಾಮಕ್ಕೆ ಬಂದು ಗುಂಡು ಹಾರಿಸಿದ 7 ಜನರನ್ನು ಪೊಲೀಸರು ಬಂಧಿಸಿ ಎಡೆಮುರಿ ಕಟ್ಟಿದ್ದಾರೆ

Chitradurga 7 people arrest

 

 

 

ಮೈಸೂರು ಜಿಲ್ಲೆಯ  ಬೆಟ್ಟದಪುರ ಸಮೀಪದ ಪಿರಿ ಯಾ ಪಟ್ಟಣದ ಬಿಲ್ಲನಹಳ್ಳಿಯ ಗುರುಲಿಂಗಪ್ಪ ಹಾಗೂ ಚನ್ನಬಸಪ್ಪ ಕುಟುಂಬದ ನಡುವೆ ಬೀದಿ ವಿಚಾರಕ್ಕೆ ಗಲಾಟೆ ನಡೆದು ಗ್ರಾಮದಲ್ಲಿ ಪಂಚಾಯಿತಿ ನಡೆದ್ರೂ ಬಗೆ ಹರಿಯದೆ  ಪ್ರಕರಣ ನ್ಯಾಯಾಲಯದಲ್ಲಿದೆ.
ಈ ಮಧ್ಯೆ ಚನ್ನಬಸಪ್ಪನ ಮೊಮ್ಮಗಳ ಗಂಡ ಸುನೀಲ್ ಕುಮಾರ್ ತನ್ನ ಸ್ನೇಹಿತರೊಂದಿಗೆ   ಗುರುಲಿಂಗಪ್ಪನ ಕುಟುಂಬದೊಂದಿಗೆ ಗಲಾಟೆ ಮಾಡಲು  ಮುಂದಾಗಿದ್ದಾನೆ. ಈ ಸಮಯದಲ್ಲಿ ಈತನೊಂದಿಗೆ ಬಂದಿದ್ದ  ಕರ್ನಾಟಕ ಚಳುವಳಿ ವೇದಿಕೆ ಅಧ್ಯಕ್ಷ  ಬೆಂಗಳೂರಿನ ಮಧುಗೌಡ ಹಾಗೂ ಆತನ ಸಹಚರರು ಗುರುಲಿಂಗಪ್ಪ ಕುಟುಂಬದೊಂದಿಗೆ ಗಲಾಟೆ ಮಾಡಲು‌ ಮುಂದಾಗಿದ್ದರು. ಗಲಾಟೆಯನ್ನು ಪ್ರಶ್ನಿಸಿದ ಗ್ರಾಮಸ್ಥರನ್ನು ಬೆದರಿಸಲು  ಗುಂಡು ಹಾರಿಸಿದ್ದಾರೆ. ಇದರಿಂದ ಬೆಚ್ಚಿ ಬಿದ್ದ ಗ್ರಾಮಸ್ಥರು ಇವರುಗಳು ತಂದಿದ್ದ ವಾಹನಗಳನ್ನು ತಡೆದು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪೋಲಿಸರು 7 ಜನರನ್ನು ಬಂಧಿಸಿದ್ದು ಉಳಿದವರು  ತಪ್ಪಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ  ಬಿಲ್ಲಹಳ್ಳಿ ಬಿಎಂ ಚನ್ನಬಸಪ್ಪ ಮೊಮ್ಮಗಳ ಪತಿ ಬಿಎನ್ ಸುನೀಲ್ ಕುಮಾರ್ ಖಾಸಗಿ ನ್ಯೂಸ್ ಚಾನಲ್ ಹಾಗೂ ಕನ್ನಡ ಚಳವಳಿ ವೇದಿಕೆ ರಾಜ್ಯಾಧ್ಯಕ್ಷ ಮಧುಗೌಡ ಯಸೀನ್, ಪುನೀತ್ ಕುಮಾರ್ ಪುನೀತ, ಸಚಿನ್ ಸೇರಿದಂತೆ ಒಟ್ಟು 7 ಜನರನ್ನು  ಬಂಧಿಸಿದ್ದು ಇವರ ಗನ್ ಮ್ಯಾನ್ ಹಾಗೂ ಇತರರು ತಪ್ಪಿಸಿಕೊಂಡಿದ್ದಾರೆ.

ಸಂಯುಕ್ತವಾಣಿ.

ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *