ಚಿತ್ರದುರ್ಗ,ಸಾರಿಗೆ ನೌಕರರಿಗೆ ನೀಡಿರುವ ಮಾತಿನಂತೆ ಸರ್ಕಾರ 8 ಬೇಡಿಕೆಗಳನ್ನು ಈಡೇರಿಸಿ ಆದೇಶ ನೀಡಲಾಗಿದೆ. ಉಳಿದಿರುವುದು ಇನ್ನೊಂದು ಅದು ಆರನೇ ವೇತನ ಜಾರಿಯಾಗಬೇಕು ಎಂಬುದು ಅದನ್ನು ನಾವು ಮಾಡುತ್ತೇವೆ ಇದಕ್ಕೆ ನಾವು ಬದ್ದ ಶೀಘ್ರದಲ್ಲಿಯೇ ಅದನ್ನು ಈಡೇರಿಸುತ್ತೇವೆ
ಎಂದು ಉಪ ಮುಖ್ಯ ಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ನಿಮ್ಮ ಬೇಡಿಕೆಗಳು 10 ಇದ್ದು ಅವುಗಳಲ್ಲಿ 9 ನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದೆವು. ಈಗ ಮೂರು ತಿಂಗಳಾಗಿದೆ. 9 ರಲ್ಲಿ 8 ಬೇಡಿಕೆಗಳನ್ನು ಪೂರೈಸಿ ಸರ್ಕಾರ ಅದೇಶವನ್ನು ನೀಡಿದೆ. ಇನ್ನೊಂದು ಬಾಕಿನಿದೆ.ಅದೇ ಆರನೇ ವೇತನ ಆಯೋಗ ಇದರ ಬಗ್ಗೆ ನಮ್ಮ ಅಧಿಕಾರಿಗಳು ಈಗಾಗಲೇ ಸುಮಾರು ಐದರಿಂದ ಆರು ಸಭೆಗಳನ್ನು ನಡೆಸಿದ್ದಾರೆ. ಇನ್ನು ನಾಲ್ಕೈದು ಸಭೆಗಳು ನಡೆಯಬೇಕಾಗಿದೆ. ನಂತರ ಎಷ್ಟು ಶೇಕಡ ಮಾಡಬೇಕು ಎಂದು ತೀರ್ಮಾನಿಸಿ ನಂತರದ ಅದನ್ನು ಜಾರಿಗೊಳಿಸುತ್ತೇವೆ. ಖಂಡಿತ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೆವೆ ಎಂದು ಉಪಮುಖ್ಯ ಮಂತ್ರಿ ಹಾಗು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಸಂಯುಕ್ತವಾಣಿ