ಸಿಕ್ಕಷ್ಟು ಬಾಚು ಮಗ ಬಿಡಬೇಡ ಇದು ಆರ್ ಟಿ ಓ ಸಿಬ್ಬಂದಿ‌ ಡೀಲ್

ಜಿಲ್ಲಾ ಸುದ್ದಿ

ಸಾರಿಗೆ ಸಚಿವರ ಕ್ಷೇತ್ರದಲ್ಲಿ ಬಾರೀ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಇದೀಗ ಬಟಾ ಬಯಲು

 

 

 

 

ಸಾರಿಗೆ ಸಚಿವ ಶ್ರೀರಾಮುಲು ಅವರು ಆರ್ ಟಿ ಓ ಕಚೇರಿಯ ಕೆಲಸಗಳು ಸುಗಮವಾಗಿ ನಡೆಯಲು ಹಾಗೂ ಲಂಚ ಮುಕ್ತವಾಗಿಸಲು 30 ಕಾರ್ಯಕ್ರಮಗಳನ್ನು ಆನ್ ಲೈನ್ ನಲ್ಲಿ‌ ಸಿಗುವಂತೆ ಮಾಡಿದ್ದೇವೆ ಎಂದು ಹೇಳಿಕೆಗಳನ್ನು ಕೊಡುತ್ತಾರೆ. ಆದರೆ ಕೋಟೆ ನಾಡು ಚಿತ್ರದುರ್ಗದ ಆರ್ ಟಿ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿರುವ ಬಾರಿ ಭ್ರಷ್ಠಾಚಾರದ ಬಹಿರಂಗವಾಗಿ ವಿಡಿಯೋ ವೈರಲ್ ಆಗಿದೆ. ಡಿಎಲ್ ಮಾಡಿಸಬೇಕು, ಡಿಲ್ ರಿನಿವಲ್ ಮಾಡಿಸಬೇಕು ನೋಂದಣಿ ಮಾಡಿಸಬೇಕು ಎಂದರೆ, ಆನ್ ಲೈನ್ ಅರ್ಜಿ ಹಾಕಬೇಕು ಎಂದು ಹೇಳುವ ಇಲಾಖೆ ಅಧಿಕಾರಿಗಳು, ಇದ್ಯಾಕೆ ಲಂಚ ತೆಗೆದುಕೊಳ್ಳುತ್ತಿದ್ದಾರೋಏನೋ ಸರ್ಕಾರಿ ನಿಯಮ ಇವರಿಗೆ ಅನ್ವಯಿಸುವುದಿಲ್ಲವೋ‌ ಎಂದು ತಿಳಿಯದಾಗಿದೆ. ಇಲಾಖೆಯಲ್ಲಿ ಸೂಪರಿನ್ ಟೆಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಳೀನ, ಎಫ್ ಡಿಎ ಗಳಾದ ವಿಶ್ವನಾಥ್, ಕಸ್ತೂರಿ ಮತ್ತು ಕಂಪ್ಯೂಟರ್ ಆಪರೇಟರ್ ಆದ ಸಂದೀಪ್ ಸಾರ್ವಜನಿಕರಿಂದ ಲಂಚದ ಹಣ ಪೀಕುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರಿಂದ ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಂಚವೇ ನಡೆಯುವುದಿಲ್ಲ ಎಂದು ಬೊಬ್ಬೆ ಹೊಡೆಯುವ ಹಿರಿಯ ಅಧಿಕಾರಿಗಳಿಗೆ ಇದು ಕಾಣಲಿಲ್ಲವೆ ? ಅಥವ ಇವರ ಕುಮ್ಮಕ್ಕಿನ ಅಡಿಯಲ್ಲಿ ಇದು ನಡೆಯುತ್ತಿದೆಯೆ ಎಂಬ ಅನುಮಾನ ಮೂಡುತ್ತಿದೆ.

Leave a Reply

Your email address will not be published. Required fields are marked *